ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡಿನ ಸರ್ಕಾರಿ ಶಾಲೆಯ ಆವರಣದಲ್ಲಿ ಶಾಲಾಮಕ್ಕಳಿಗಾಗಿ ಶೌಚಾಲಯದ ಕಾಮಗಾರಿ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಸಂದ್ರ ವಾರ್ಡಿನ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀ ಶಶಿಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ಶ್ರೀ ಟಿ.ಎಸ್ ಗಂಗರಾಜು, ಶ್ರೀ ಎಂ ಆರ್ ಶ್ರೀನಿವಾಸ್, ಶ್ರೀ ಪಾಂಡುರಂಗರಾವ್, ಶ್ರೀ ಗವಿಯಣ್ಣ, ಶ್ರೀ ಗಂಗಾಧರ, ಶ್ರೀ ಉದಯಕುಮಾರ್, ಶ್ರೀ ಮುರುಗನ್(ಅಯ್ಯಾ), ಶ್ರೀ ಎಂ.ವಿ. ಪಟ್ಟಣಶೆಟ್ಟಿ, ಶ್ರೀ ಕಾಂತರಾಜು ಮತ್ತು ಇತರ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.