ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್ ಕೊಕಟನೂರು ಶಾಖೆಗೆ ನಿರ್ದೇಶಕಿ ಸುನಿತಾ ಐಹೊಳೆ ಭೇಟಿ
ದಿನಾಂಕ 12/03/2026 ರಂದು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುನಿತಾ ಎ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್ ಕೊಕಟನೂರು ಶಾಖೆಗೆ ನಿರ್ದೇಶಕಿ ಸುನಿತಾ ಐಹೊಳೆ ಭೇಟಿ
ದಿನಾಂಕ 12/03/2026 ರಂದು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುನಿತಾ ಎಸ್ ಐಹೊಳೆ ಅವರು ಡಿಸಿಸಿ ಬ್ಯಾಂಕ್ ಕೊಕಟನೂರು ಶಾಖೆಗೆ ಭೇಟಿ ನೀಡಿ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಹಾಗೂ ಸೆಕ್ರಟರಿಗಳ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಶಾಖೆಯ ಕಾರ್ಯಚಟುವಟಿಕೆಗಳು, ಜನಸಾಮಾನ್ಯರಿಗೆ ನೀಡಲಾಗುತ್ತಿರುವ ಸೇವೆಗಳು ಹಾಗೂ ಅಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಸ್ಥಳೀಯರು ಹಾಗೂ ಸಿಬ್ಬಂದಿಯಿಂದ ಬಂದ ಸಮಸ್ಯೆಗಳು ಮತ್ತು ಅಡಚಣೆಗಳನ್ನು ಅವರು ಗಮನದಿಂದ ಆಲಿಸಿ, ಅವುಗಳನ್ನು ಶೀಘ್ರದಲ್ಲಿ ಪರಿಹರಿಸುವ ಕುರಿತು ಸೂಚನೆಗಳನ್ನು ನೀಡಿದರು.
ಇದೇ ವೇಳೆ, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸಿದರೆ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದರು. ಬ್ಯಾಂಕ್ ಕಾರ್ಯಗಳು ಜನಸಾಮಾನ್ಯರ ಹಿತಕ್ಕಾಗಿ ನಿಷ್ಠೆಯಿಂದ ನಡೆಯಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶಾಖೆಯ ಸೆಕ್ರಟರಿಗಳು ಹಾಗೂ ಸಿಬ್ಬಂದಿ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸುನಿತಾ ಎಸ್ ಐಹೊಳೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಜನರ ವಿಶ್ವಾಸವೇ ನಮ್ಮ ಶಕ್ತಿ ಎನ್ನುವ ಸಂದೇಶದೊಂದಿಗೆ, ಬ್ಯಾಂಕ್ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕು ಎಂಬುದನ್ನು ಅವರು ಒತ್ತಿ ಹೇಳಿದರು.
ಜನರ ಧನ – ಜನರ ಸೇವೆ…
ಸಹಕಾರದ ಶಕ್ತಿ – ಜನರ ಅಭಿವೃದ್ಧಿಗೆ ದಾರಿ