
*ಖಡಕಲಾಟ ಪೂಜ್ಯರಿಗೆ ಕುಮಾರ ಸಿರಿ ಪ್ರಶಸ್ತಿ ಪ್ರದಾನ*
ಇಂದು ಘಟಪ್ರಭಾ ನಗರದಲ್ಲಿ ಜರುಗಿದ *ಲಿಂ ಹಾನಗಲ್ ಗುರು ಕುಮಾರ ಶಿವಯೋಗಿಗಳ ಮತ್ತು ಲಿಂ ಶಿವಲಿಂಗ ಶಿವಯೋಗಿಗಳ ಸ್ಮರಣೋತ್ಸವ ಕ
*ಖಡಕಲಾಟ ಪೂಜ್ಯರಿಗೆ ಕುಮಾರ ಸಿರಿ ಪ್ರಶಸ್ತಿ ಪ್ರದಾನ*
ಇಂದು ಘಟಪ್ರಭಾ ನಗರದಲ್ಲಿ ಜರುಗಿದ *ಲಿಂ ಹಾನಗಲ್ ಗುರು ಕುಮಾರ ಶಿವಯೋಗಿಗಳ ಮತ್ತು ಲಿಂ ಶಿವಲಿಂಗ ಶಿವಯೋಗಿಗಳ ಸ್ಮರಣೋತ್ಸವ ಕುಮಾರೇಶ್ವರ ಹೊಸಮಠದ ಭವ್ಯ ಕಾರ್ಯಕ್ರಮದಲ್ಲಿ ಕುಮಾರೇಶನ ತತ್ವ ಪರಿಪಾಲಕರೂ ಕ್ಷಣಕ್ಷಣಕ್ಕೂ ಕುಮಾರೇಶನನ್ನೇ ಆರಾಧಿಸುವ ನರನಾಡಿಗಳಲ್ಲಿ ಕುಮಾರ ರಕ್ತವನ್ನೇ ಹೊಂದಿರುವ ಕಟ್ಟಾ ಕುಮಾರವರಪುತ್ರರಾದ ಖಡಕಲಾಟ ಅಪ್ಪನವರ ಕುಮಾರೇಶ್ವರ ವಿರಕ್ತಮಠದ ಶ್ರೀ ಮ ನಿ ಪ್ರ ಸ್ವ ಶಿವಬಸವ ಮಹಾಸ್ವಾಮಿಗಳವರಿಗೆ 2026 ಕುಮಾರ ಸಿರಿ ಪ್ರಶಸ್ತಿ ಪ್ರದಾನ ಜರುಗಿತು ಪಾವನ ಸಾನಿಧ್ಯವನ್ನು ಘೋಡಗೇರಿ ವಿರಕ್ತಮಠದ ಶ್ರೀ ಮ ನಿ ಪ್ರ ಸ್ವ ಕಾಶಿನಾಥ ಮಹಾಸ್ವಾಮಿಗಳು, ಸಮ್ಮುಖವನ್ನು ಗೋಕಾಕ ಸಂಪಾದನಾ ಮಠದ ಪ ಪೂ ಬಸವಪ್ರಭು ದೇವರು, ನೇತೃತ್ವವನ್ನು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಮ ನಿ ಪ್ರ ಸ್ವ ವಿರೂಪಾಕ್ಷ ಮಹಾಸ್ವಾಮಿಗಳು* ವಹಿಸಿದ್ದರು ವಿವಿಧ ಹರಗುರು ಚರಮೂತಿ೯ಗಳು ಉಪಸ್ಥಿತರಿದ್ದರು ಆರಂಭದಲ್ಲಿ ಗುರುಗಳ ಮೆರವಣಿಗೆ ಜರುಗಿತು ಮಹಾದಾಸೋಹ ನಡೆಯಿತು ಈ ಸಂದರ್ಭದಲ್ಲಿ ನಿಪ್ಪಾಣಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೋ ಮಿಥುನ ಅಂಕಲಿ,ಅನಿಲ ಪಾಟೀಲ ಜೆಜೆ ಆಸ್ಪತ್ರೆ ಅಧ್ಯಕ್ಷರು,ರೈತ ಸಂಘಟನೆ ಅಧ್ಯಕ್ಷರು,ಸಹಿತ ವಿವಿಧ ಸದ್ಭಕ್ತರು ಉಪಸ್ಥಿತರಿದ್ದರು