
*ಕಾಂಗ್ರೆಸ್ ಮುಖಂಡ ಅಕ್ಕಿ ಮಂಜು ನೇತೃತ್ವದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹುಟ್ಟುಹಬ್ಬ ಆಚರಣೆ*
ಕೆ.ಆರ್.ಪೇಟೆ: ಕೃಷಿ ಸಚಿವ ಎನ್.ಚಲ
*ಕಾಂಗ್ರೆಸ್ ಮುಖಂಡ ಅಕ್ಕಿ ಮಂಜು ನೇತೃತ್ವದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹುಟ್ಟುಹಬ್ಬ ಆಚರಣೆ*
ಕೆ.ಆರ್.ಪೇಟೆ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರವರ ಹುಟ್ಟು ಹಬ್ಬದ ಪ್ರಯುಕ್ತ ಕಾಂಗ್ರೆಸ್ ಮುಖಂಡ ಲಕ್ಷ್ಮಿಪುರ ಅಕ್ಕಿ ಮಂಜು ರವರ ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶ್ರೀ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ತಿನಿಸುವ ಮೂಲಕ ಅರ್ಥಪೂರ್ಣವಾಗಿ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಯಿತು.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮುಖಂಡ ಲಕ್ಷ್ಮಿಪುರ ಅಕ್ಕಿ ಮಂಜು ರಾಜ್ಯದ ಘನ ಸರ್ಕಾರದಲ್ಲಿ ಕೃಷಿ ಸಚಿವರಾಗುವ ಮೂಲಕ ನಮ್ಮ ನಾಯಕರಾದ ಎನ್.ಚಲುವರಾಯಸ್ವಾಮಿ ರವರು ರೈತರಿಗೆ ಹಿತ ಕಾಯಲು ಹಗಲು ಇರುಳು ಶ್ರಮಿಸುತಿದಾರೆ.ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಾಣಾಕ್ಷರಾಗಿ ಹೊರಹಮ್ಮಿದ್ದಾರೆ. ಅವರ ನೇತೃತ್ವದಲ್ಲಿ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿಯಾಗಿ ದೀನ ದಲಿತರ ಅಭಿವೃದ್ಧಿಗೆ ಚಿಂತಿಸುವ ಅಪರೂಪದ ರಾಜಕಾರಣಿಯಾಗಿದ್ದಾರೆ. ಅವರ ಸೇವೆ ಜಿಲ್ಲೆ ಜನತೆಗೆ ಇನ್ನೂ ಸುದೀರ್ಘ ಅವಶ್ಯಕತೆ ಇದೆ ಹಾಗಾಗಿ ಪಟ್ಟಣದ ಜನತೆಯ ಅಂಗರಕ್ಷಕ ಶ್ರೀ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಮುಂದಿನ ದಿನಮಾನಗಳಲ್ಲಿ ರಾಜಕೀಯ ವಲಯದಲ್ಲಿ ಉನ್ನತ ಸ್ಥಾನ ಗಳಿಸಲಿ ಎಂದು ಪ್ರಾರ್ಥಿಸಿ ಸಾರ್ವಜನಿಕರಿಗೆ ಸಿಹಿ ತಿನಿಸಿದ್ದೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಅಗ್ರಹಾರ ಬಾಚಹಳ್ಳಿ ಕಾಂತರಾಜು ರಾಜ್ಯದ ರೈತರ ಶ್ರೇಯೋಭಿವೃದ್ಧಿಗೆ ಹಗಲು ಇರಳು ಶ್ರಮವಹಿಸುತ್ತಿರುವ ಎನ್. ಚಲುವರಾಯಸ್ವಾಮಿ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಮ್ಮ ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಅವರ ಪರಮ ಶಿಷ್ಯ ಲಕ್ಷ್ಮಿಪುರ ಅಕ್ಕಿ ಮಂಜು ರವರ ನೇತೃತ್ವದಲ್ಲಿ ನಮ್ಮ ನಾಯಕ ಎನ್.ಚಲುವರಾಯಸ್ವಾಮಿ ರವರ ಆಶಯದಂತೆ ಸರಳವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಅವರ ಆಡಳಿತ ಅವಧಿಯಲ್ಲಿ ಮತ್ತಷ್ಟು ಜಿಲ್ಲೆ ಹಾಗೂ ತಾಲ್ಲೂಕು ಸಮಗ್ರ ಅಭಿವೃದ್ಧಿ ಮಾಡುವಷ್ಟು ಭಗವಂತ ಅನುಗ್ರಹಿಸಲಿ ಅವರ ಸೇವೆ ಜಿಲ್ಲೆಯ ಜನತೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅಪಾರವಿದೆ ಮತ್ತು ಅವರ ಶಿಷ್ಯ ಅಕ್ಕಿ ಮಂಜು ಅವರ ಹುಟ್ಟುಹಬ್ಬ ಕೂಡ ಈ ದಿನವೇ ಆಗಿದೆ ಅವರಿಗೂ ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯ ಉತ್ತಮವಾಗಿರಲಿ ಎಂದು ಶುಭ ನುಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೊಸಹೊಳಲು ಶ್ಯಾಮಿಲ್ ರಘುನಾಥ್,ರೈಸ್ ಮಿಲ್ ರಮೇಶ್,ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಪ್ರಶಾಂತ್,ದರ್ಶನ್,ಮಹೇಶ್,ಅಗ್ರಹಾರಬಾಚಹಳ್ಳಿ ಸುನೀಲ್,ದೇವಾಲಯದ ಅರ್ಚಕ ಶ್ರೀನಿವಾಸ್ ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*