logo

*ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಯಾಗಿದ್ದರೂ ಜನ ಉಪಯೋಗಿಸುತ್ತಿರುವುದು ದುರಂತ ಡಾ :ಲೋಹಿತ್* ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮ

*ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಯಾಗಿದ್ದರೂ ಜನ ಉಪಯೋಗಿಸುತ್ತಿರುವುದು ದುರಂತ ಡಾ :ಲೋಹಿತ್*

ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಸಬಾ ವಲಯದಿಂದ ಆಯೋಜಿಸಿದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಮಾದೇಗೌಡ ಮೆಮೋರಿಯಲ್ ಹಾಸ್ಪಿಟಲ್ ಮುಖ್ಯ ವೈದ್ಯ ಡಾ: ಲೋಹಿತ್ ಶ್ರೀ ಧರ್ಮಸ್ಥಳ ಸಂಘ ಮಹಿಳಾ ಸಂಘಟನೆ ಮೂಲಕ ವಿಶ್ವ ತಂಬಾಕು ವಿರೊಧಿ ದಿನವನ್ನು ಆಚರಿಸುತ್ತಿರುವುದು ಸಾಮಾಜಿಕ ಪರಿವರ್ತನೆಗೆ ಪೂರಕವಾಗಿದೆ.ಮಹಿಳೆಯೊಬ್ಬಳು ಮಕ್ಕಳು ಹಾಗೂ ಇಡೀ ಕುಟುಂಬವನ್ನು ದುಶ್ಚಟಗಳಿಂದ ದೂರವಿರುವಂತೆ ಅರಿವು ಮೂಡಿಸುವುದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರಿಂದ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಯಾಗಿದ್ದರೂ ಜನ ಉಪಯೋಗಿಸುತ್ತಿರುವುದು ದುರಂತ. ಸಿಗರೇಟಿನಲ್ಲಿ ನಿಕೋಟಿನ್‌ ಅಂಶವಿದ್ದು, ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಶೇ.70ರಷ್ಟು ಜನ ತಂಬಾಕು ಸೇವಿಸಿ ಕ್ಯಾನ್ಸರ್‌ ಹಾಗೂ ಇತರ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಕುರಿತು ವ್ಯಾಪಕ ಪ್ರಚಾರ ಮಾಡಿ ಜಾಗೃತಿ ಮೂಡಿಸಿದರೂ ಪ್ರಯೋನವಾಗುತ್ತಿಲ್ಲ.ಆದ್ದರಿಂದ ಮಹಿಳೆ ತನ್ನ ಇಡೀ ಕುಟುಂಬವನ್ನು ತಂಬಾಕು ಸೇವನೆಯಿಂದ ಮುಕ್ತಗೊಳಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಗುಣ ಶ್ರೀ, ಒಕ್ಕೂಟ ಅಧ್ಯಕ್ಷರಾದ ಕುಸುಮ,ಸುಧಾ, ಗ್ರಾಮದ ಮುಖಂಡರಾದ ಜಯರಾಮು,ವಲಯದ ಸೇವಾ ಪ್ರತಿನಿಧಿಗಗಾಳದ ನೇತ್ರಾವತಿ, ಸುನಿತಾ,ಅನಿತಾ, ಶಶಿಕಲಾ ,ಉಮಾ, ಶ್ವೇತ, ಸೇರಿದಂತೆ ಉಪಸ್ಥಿತರಿದ್ದರು.

*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

1
25 views