logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಂಗಳೂರು ವಿವಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಹೊಣೆ: ಡಾ. ರಮೇಶ್ ಕಿತ್ತೂರು ಅಭಿಮತ ಬೆಂಗಳೂರು: ಜೂ.6: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾ

ಬೆಂಗಳೂರು ವಿವಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಹೊಣೆ: ಡಾ. ರಮೇಶ್ ಕಿತ್ತೂರು ಅಭಿಮತ

​ಬೆಂಗಳೂರು: ಜೂ.6: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮತ್ತು ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿವಿಯ ಎನ್ಎಸ್ಎಸ್ ಸಂಯೋಜನಾಧಿಕಾರಿಗಳಾದ ಡಾ. ರಮೇಶ್ ಕಿತ್ತೂರು ಅವರು, ಪರಿಸರ ಮಾಲಿನ್ಯದ ಭೀಕರತೆ ಮತ್ತು ಅದನ್ನು ತಡೆಗಟ್ಟುವಲ್ಲಿ ಯುವಜನತೆಯ ಮಹತ್ತರ ಪಾತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಪ್ರಕೃತಿಯೇ ನಮಗೆ ಜೀವನಾಡಿ. ಆಧುನಿಕ ಜೀವನ ಶೈಲಿಯಲ್ಲಿ ನಾವು ಪ್ರಕೃತಿಯಿಂದ ದೂರವಾಗುತ್ತಿದ್ದೇವೆ. ಪರಿಸರವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ದಿನ ನಿತ್ಯದ ಜೀವನದಲ್ಲಿ ಮರ-ಗಿಡಗಳನ್ನು ಬೆಳೆಸುವ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವ, ಜಲ ಸಂರಕ್ಷಣೆಯ ಸಂಕಲ್ಪವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತೊಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ-2 ಕಾರ್ಯಕ್ರಮಾಧಿಕಾರಿ ಡಾ. ರತ್ನಕುಮಾರಿ ಬಿ ಎಂ,ಅವರು , ಸಸ್ಯಗಳು ಮನುಜನಿಗೆ ನೀಡುತ್ತಿರುವ ಅಪಾರವಾದ ಕೊಡುಗೆ ಹಾಗೂ ಸಸ್ಯಗಳಿಗೂ ಮನುಷ್ಯರಿಗೂ ಇರುವ ಅವಿನಾಭಾವ ಸಂಬಂಧವನ್ನು ಕುರಿತು ತಿಳಿಸಿದರು.

ಅಂತೆಯೇ, ಪ್ರಸ್ತುತ ದಿನದಲ್ಲಿ ಸಸ್ಯಗಳು ಕೇವಲ ಭೂಮಿಯ ಅಲಂಕಾರವಲ್ಲ, ಅವು ಪ್ರತಿಯೊಂದು ಜೀವಿಗೂ ಉಸಿರು ನೀಡುವ ಜೀವನಾಡಿಗಳು. ನಾವು ನೆಡುವ ಪ್ರತಿಯೊಂದು ಸಸಿಯೂ ನಾಳೆಯ ಜಗತ್ತಿನ ಸಮತೋಲನವನ್ನು ಕಾಪಾಡುವ ಒಂದು ಸಣ್ಣ ಹೆಜ್ಜೆಯಾಗಿದೆ. ಇಂದು ನಾವು ಕೇವಲ ಒಂದು ಗಿಡವನ್ನು ನೆಡುತ್ತಿಲ್ಲ, ಬದಲಾಗಿ ಭವಿಷ್ಯದ ಸುಸ್ಥಿರತೆಯನ್ನು ಬಿತ್ತುತ್ತಿದ್ದೇವೆ. ಎಂದು ಪರಿಸರ ಸಂರಕ್ಷಣೆಯ ಕುರಿತು ಅರ್ಥಪೂರ್ಣವಾಗಿ ತಿಳಿಸಿದರು.

ಇದೇ ವೇಳೆಯಲ್ಲಿ ಬೆಂವಿವಿಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ರಮೇಶ್ ಕಿತ್ತೂರು, ಬೆಂಗಳೂರು ವಿವಿಯ ಉಪ ಕುಲಸಚಿವ ಸುರೇಶ್, ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ಪ್ರೊ. ರತ್ನಕುಮಾರಿ ಬಿ ಎಂ,ಎಎಸ್ಸಿ ಪದವಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ವಿಶ್ವಾರಾಧ್ಯ, ಚಂದ್ರಪ್ಪ ಎಂ. ಮಿಡ್ಲುಮುನಿ, ಬೆಂಗಳೂರು ವಿವಿಯ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷ ಶೇಷಾದ್ರಿ ಜಿ.ಸಿ, ಅತಿಥಿ ಉಪನ್ಯಾಸಕ ಡಾ. ಅನಂತಕೃಷ್ಣಸ್ವಾಮಿ ಡಿ.ಎಸ್, ರವಿಕುಮಾರ್, ಭೂಮಿಕಾ, ನಂದಿತಾ, ಲೇಖನ ಸೇರಿದಂತೆ ಎನ್ಎಸ್ಎಸ್ ಘಟಕದ ಸ್ವಯಂ ಸೇವಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು.

ಪೋಟೋ ಕ್ಯಾಪ್ಷನ್:
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತವಾಗಿ ಗಿಡಗಳನ್ನು ನೆಡುವ ಮೂಲಕ ಗಣ್ಯರು ಚಾಲನೆ ನೀಡಿದರು.

ಕೋಟ್1:
ಯುವ ಜನರು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಸುಸ್ಥಿರ ಭೂಮಿಯನ್ನು ಉಳಿಸಿಕೊಡಬೇಕಾದ ವಿವಿಯ ಆವರಣದಲ್ಲಿ ಇಂತಹ ಪರಿಸರ ಸ್ನೇಹಿ ಅಭಿಯಾನಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು.
- ಡಾ. ರಮೇಶ್ ಕಿತ್ತೂರು, ಎನ್ಎಸ್ಎಸ್ ಸಂಯೋಜನಾಧಿಕಾರಿಗಳು

ಕೋಟ್2:
ಪ್ರತಿಯೊಂದು ಸಸಿಯೂ ತನ್ನದೇ ಆದ ವಿಶಿಷ್ಟ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಅದನ್ನು ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಗಿಡ ನೆಡುವುದು ಕೇವಲ ಕೃಷಿಯಲ್ಲ, ಅದು ಪ್ರಕೃತಿಯ ಮೇಲಿನ ನಮ್ಮ ಗೌರವದ ಸಂಕೇತವಾಗಿದೆ.
- ಪ್ರೊ. ಬಿ.ಎಂ. ರತ್ನಕುಮಾರಿ, ಎನ್ಎಸ್ಎಸ್ ಘಟಕ-2 ಕಾರ್ಯಕ್ರಮಾಧಿಕಾರಿ, ವಿಜಯನಗರ ಪ್ರಥಮ ದರ್ಜೆ ಕಾಲೇಜು

ಬಾಕ್ಸ್:
ಸಸ್ಯಗಳು ದ್ಯುತಿ ಸಂಶ್ಲೇಷಣೆಯ ಮೂಲಕ ನಮಗೆ ಆಮ್ಲಜನಕವನ್ನು ಉಚಿತವಾಗಿ ನೀಡುತ್ತವೆ. ಆದರೆ ಪ್ರತಿಯಾಗಿ ನಾವು ಅವುಗಳಿಗೆ ಕೊಡುವ ರಕ್ಷಣೆ ಅತ್ಯಲ್ಪ. ಅರಣ್ಯನಾಶ ಮತ್ತು ನಗರೀಕರಣದಿಂದ ನಾವು ನಿಸರ್ಗದೊಂದಿಗೆ ಕಳೆದುಕೊಂಡಿರುವ ಸಂಪರ್ಕವನ್ನು ಮರುಸ್ಥಾಪಿಸುವುದು ನಮ್ಮ ಆದ್ಯತೆಯಾಗಬೇಕು.

15
981 views

Comment