ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಚಮಕೇರಿ ಗ್ರಾಮದಲ್ಲಿ ಸುಕನ್ಯಾ ವೃದ್ದಾಶ್ರಮದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕರು ಡಿ ಸಿ ಸಿ ಬ್ಯಾಂಕ ಉಪಾಧ್ಯಕ್ಷರು, ರಾಜ್ಯ ಸರಕಾರದ ವಾಯುವ್ಯ
ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಚಮಕೇರಿ ಗ್ರಾಮದಲ್ಲಿ ಸುಕನ್ಯಾ ವೃದ್ದಾಶ್ರಮದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕರು ಡಿ ಸಿ ಸಿ ಬ್ಯಾಂಕ ಉಪಾಧ್ಯಕ್ಷರು, ರಾಜ್ಯ ಸರಕಾರದ ವಾಯುವ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರಾದ ರಾಜು ಕಾಗೆ ಅವರ 68 ನೇ ಹುಟ್ಟುಹಬ್ಬದ ನಿಮಿತ್ಯ (PMBS)ಪತ್ರಿಕಾ ಮಾಧ್ಯಮ ಬಡವರ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷರು ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ಅಧ್ಯಕ್ಷರಾದ ಪ್ರವೀಣ ನಾಯಿಕ ವೃದ್ಧರಿಗೆ ಹಣ್ಣು ವಿತರಿಸಿ ಮಾತನಾಡಿದ ಅವರು ನೇರ ನುಡಿ ದಿಟ್ಟ ನಿರ್ಧಾರ ನಿರಂತರ ಕಾಗವಾಡ ಮತಕ್ಷೇತ್ರದ ಅಭಿವೃದ್ಧಿ ಜನಸಾಮಾನ್ಯರ ಸಮಸ್ಯ ಬಗೆಹರಿಸುವ ಧೀಮಂತ ನಾಯಕರು ಇವರು ಶಾಸಕರು ಇಂತಹ ವೃದ್ದಾಶ್ರಮಕ್ಕೆ ಭೇಟಿ ನೀಡಿ ಸಹಾಯ ಸಹಕಾರ ನೀಡಬೇಕೆಂದು ಹೇಳಿ ಹಣ್ಣು ವಿತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಸುಕನ್ಯಾ ವೃದ್ದಾಶ್ರಮ ಸಂಸ್ಥಾಪಕ ಅಧ್ಯಕ್ಷರಾದ ಮಹಾದೇವ ಬಿರಾದಾರ,ಪತ್ರಿಕಾ ಮಾಧ್ಯಮ ಬಡವರ ಸೇವಾ ಸಂಸ್ಥೆಯ ರಾಜ್ಯ ಗೌರವಾಧ್ಯಕ್ಷರಾದ ಶರಣಪ್ಪಾ ಶಿಂದೆ, ರಾಜ್ಯಉಪಾಧ್ಯಕ್ಷ ಅನೀಲ ಭಾಮನೆ, ರಾಜ್ಯಮಾಧ್ಯಮ ಘಟಕದ ಅಧ್ಯಕ್ಷ ಎಂ ಶರ್ಮಾ, ಶಿವಾನಂದ ನಾವಿ, ಪ್ರಶಾಂತ ಶಿಂದೆ ಉಪಸ್ಥಿತರಿದ್ದರು
ವರದಿ ಮಹೇಶ್ ಶರ್ಮಾ