ಅವಹೇಳನಕಾರಿ ದ್ವೇಷ ಭಾಷಣ, ಶಾಂತಿ ಸೌಹಾರ್ದತೆ ಸಾಮರಸ್ಯಕ್ಕೆ ಧಕ್ಕೆ-ಅಲ್ಲಮಪ್ರಭು
ಮಾಜಿ ಶಾಸಕ ಅಪ್ಪು ಗೌಡ ಪಾಟೀಲ್ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಲ್ಲಂಪ್ರಭು ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದರು. ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ ಅವರು ಖಮರುಲ್ ಇಸ್ಲಾಂ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಅಂತವರ ಹೆಸರು ಪ್ರಸ್ತಾಪಿಸಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವುದು ಶೋಚನೀಯ ಎಂದರು.