ಎ ಐ ಸಿ ಸಿ ಮಹತ್ವದ ತೀರ್ಮಾನ ಕಮಕ್ನೂರಗೆ ಎಂ ಎಲ್ ಸಿ ಸ್ಥಾನ ಘೋಷಣೆ
ಕೋಲಿ ಸಮಾಜದ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿರುವ ತಿಪ್ಪಣಪ್ಪ ಕಮಕ್ನೂರ್ ರನ್ನು ಪುನಃ ಎಂಎಲ್ಸಿ ಸ್ಥಾನಕ್ಕೆ ನೇಮಕ ಮಾಡುವ ನಿರ್ಧಾರ, ಕೋಲಿ ಸಮಾಜಕ್ಕೆ ಮತ್ತೊಮ್ಮೆ ಅವಕಾಶ ನೀಡಿ ಸಮುದಾಯವನ್ನು ಕಾಂಗ್ರೆಸ್ಸಿನತ್ತ ಆಕರ್ಷಿಸಿದೆ ಎನ್ನಲಾಗಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪಕ್ಷದ ಮೇಲೆ ಹಿಡಿತ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಪ್ರಭಲ ನಾಯಕರಾಗಿದ್ದು ಜಿಲ್ಲೆಗೆ ಇಬ್ಬರು ಶಾಸಕರನ್ನು ಸಚಿವರನ್ನಾಗಿ ಮಾಡಿ ಎಂ ಎಲ್ ಸಿ ಸ್ಥಾನವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ