ಸಿಎಂ ರಾಜೀನಾಮೆ ಘೋಷಣೆ ಡಿಕೆಶಿ ಭಾವುಕ ಇಬ್ಬರು ಪರಸ್ಪರ ಆಲಿಂಗನ
ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ವಿದಾಯ ಬ್ರೇಕ್ಫಾಸ್ಟ್ ಗೆ ಆಗಮಿಸಿದ ಸಚಿವರ ಸಮ್ಮುಖ ತಾವು ರಾಜೀನಾಮೆ ನೀಡುತ್ತಿರುವದಾಗಿ ಘೋಷಿಸಿದರು. ಒಪ್ಪಂದದಂತೆ ಡಿಕೆಶಿಗೆ ಅಧಿಕಾರ ಬಿಟ್ಟು ಕೊಡುತ್ತಿದ್ದೇನೆ ಎಂದಾಗ ಭಾವುಕರಾದ ಡಿಸಿಎಂ ಡಿಕೆಶಿ ಸಿದ್ದರಾಮಯ್ಯನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ನಂತರ ಸಿದ್ದರಾಮಯ್ಯ ಅವರನ್ನು ಆಲಿಂಗನ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಿಎಂ ಮೊದಲ ಬಾರಿಗೆ ಪವರ್ ಶೇರಿಂಗ್ ಬಗ್ಗೆ ಮಾತಾಡಿದರು.