ಬೀದರ್ ನಲ್ಲಿ ಕಾರುಡಿಕ್ಕಿ ಚಾಲಕನ ಮೇಲೆ ಹಲ್ಲೆ
ಬೀದರ್ ನಗರದ ಚೌಬಾರಾ ಸಮೀಪದ ಸೇಡಂಕರ್ ಆಸ್ಪತ್ರೆ ಮುಂಭಾಗದಲ್ಲಿ ಆಸ್ಪತ್ರೆ ಸಿಬ್ಬಂದಿ ಒಬ್ಬ ರಾಂಗ್ ಸೈಡ್ ಕಾರು ನಿಲ್ಲಿಸಿದ. ಎದುರಿನಿಂದ ಬಂದ ಇನ್ನೊಂದು ಕಾರು ಪರಸ್ಪರ ಡಿಕ್ಕಿಯಾದ ಕಾರಣ ಕಾರು ಚಾಲಕ ಶ್ರೀನಿವಾಸ್ ಎಂಬಾತನನ್ನು ಆಸ್ಪತ್ರೆ ಒಳಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ ಎಂದು ಮಂಗಳಪೇಟ್ ನಿವಾಸಿ ಆರೋಪಿಸಿದ್ದಾನೆ. ಅಪಘಾತ ನಡೆದಿರುವುದು ಆಕಸ್ಮಿಕ ಅದಕ್ಕಾಗಿ ಕಾನೂನು ಇದೆ, ಆದರೆ ಕಾನೂನು ಕೈಗೆತ್ತಿಕೊಂಡು ಅಲ್ಲಿ ನಡೆಸಿದ ಆತನ ಕ್ರೂರ ಕೃತ್ಯಕ್ಕೆ ಶ್ರೀನಿವಾಸ್ ಖಂಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.