ಮಿರ್ಜಾಪುರದಲ್ಲಿ 604ನೇ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ
ಹೇಮರೆಡ್ಡಿ ಮಲ್ಲಮ್ಮನ 604ನೇ ಜಯಂತೋತ್ಸವ ಬೀದರ್ ಸಮೀಪದ ಟಿ ಮಿರ್ಜಾಪುರ್ ಗ್ರಾಮದಲ್ಲಿ ರೆಡ್ಡಿ ಜನ ಸಂಘದಿಂದ ಆಚರಿಸಲಾಯಿತು. ಗ್ರಾಮದ ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ಮಾಣಿಕ್ ರೆಡ್ಡಿ , ಸಿಎಲ್ ರೆಡ್ಡಿ, ಅಂಬಣ್ಣ ಗೊರ್ಲಾ, ವಿಠಲ್ ರೆಡ್ಡಿ , ವಿಜಯೇಂದ್ರ ರೆಡ್ಡಿ , ಹಣಮಂತರೆಡ್ಡಿ , ಮಹೇಶ್ ರೆಡ್ಡಿ ,ಸಮಾರಂಭದಲ್ಲಿ ಭಾಗವಹಿಸಿದರು ಎಂದು ಅನಂತ ರೆಡ್ಡಿ ಟೀ ಮಿರ್ಜಾಪುರ್ ತಿಳಿಸಿದ್ದಾರೆ.