ಶರಣ ಸಿರಸಗಿ ಸೀಮಿಯಲ್ಲಿ ಆದಿ ಬಣಜಿಗ ಸಮಾಜಕ್ಕೆ ನಾಲ್ಕು ಎಕರೆ ಜಮೀನು ಮಂಜೂರು
ಕಲಬುರಗಿ ನಗರದ ಶರಣ ಸಿರಸಿಗಿ ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕು ಎಕರೆ ಜಮೀನು ಜಿಲ್ಲೆಯ ಆದಿ ಬಣಜಿಗ ಸಮಾಜಕ್ಕೆ ಮಂಜೂರು ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಸಮಾಜದ ಹಿತ ದೃಷ್ಟಿಯಿಂದ ಕಲ್ಯಾಣ ಮಂಟಪ ವಸತಿ ನಿಲಯ ಇನ್ನಿತರ ಚಟುವಟಿಕೆಗಳಿಗೆ ಮೀಸಲಿಡಲಾಗುವುದು ಎಂದರು. ಗುರುಶಾಂತ್ ಗೌಡ ಪಾಟೀಲ್ ಡಿಕೆ ಪಾಟೀಲ್ ಸಿದ್ದಲಿಂಗಪ್ಪ ಮಲಶೆಟ್ಟಿ ಶಿವಪುತ್ರಪ್ಪ ಪಾಟೀಲ್ ಸಂಗನಗೌಡ ಮಾಲಿ ಪಾಟೀಲ್ ವೀರಣ್ಣ ಕೊರಳ್ಳಿ ಇತರರಿದ್ದರು.