ತಾಳಿಕೋಟಿಯಲ್ಲಿ ಮೇ 24ರಂದು "ರೆಡ್ಡಿ ಜಾಗೃತಿ ಸಭೆ" : ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಹೊಸ ದಿಕ್ಸೂಚಿ
ತಾಳಿಕೋಟಿ, ಮೇ 23: ಸಮಾಜದ ಒಗ್ಗಟ್ಟು, ಶಿಕ್ಷಣ, ಯುವಜನರ ಭವಿಷ್ಯ ಹಾಗೂ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ ಮೇ 24ರಂದು ತಾಳಿಕೋಟಿಯಲ್ಲಿ "ರೆಡ್ಡಿ ಜಾಗೃತಿ ಸಭೆ" ಆಯೋಜಿಸಲಾಗಿದೆ.
ಈ ಸಭೆಯು ರೆಡ್ಡಿ ಸಮಾಜದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಲಿದ್ದು, ಸಮಾಜದ ಭವಿಷ್ಯ ನಿರ್ಮಾಣದ ದಿಕ್ಕಿನಲ್ಲಿ ಸಾಗುವ ಪ್ರೇರಣಾದಾಯಕ ಕಾರ್ಯಕ್ರಮವೆಂದು ಸಂಘಟಕರು ತಿಳಿಸಿದ್ದಾರೆ.
ಸಭೆಯಲ್ಲಿ ಸಮಾಜದ ಒಗ್ಗಟ್ಟು, ಯುವಕರಿಗೆ ಮಾರ್ಗದರ್ಶನ, ಶಿಕ್ಷಣದ ಮಹತ್ವ, ಸಂಘಟನೆಯ ಬಲವರ್ಧನೆ ಹಾಗೂ ಸಂಸ್ಕೃತಿ-ಪರಂಪರೆಯ ಉಳಿವಿನ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ. ಇಂದಿನ ಯುವ ಪೀಳಿಗೆಗೆ ಆತ್ಮವಿಶ್ವಾಸ ತುಂಬುವ ಮತ್ತು ಸಮಾಜದ ಶಕ್ತಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯ ಈ ಸಭೆಯಿಂದ ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ರೆಡ್ಡಿ ಸಮಾಜದ ಅಭಿವೃದ್ಧಿ ಹಾಗೂ ಬಲಿಷ್ಠ ಭವಿಷ್ಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರ ಸಹಕಾರ ಮತ್ತು ಸಕ್ರಿಯ ಭಾಗವಹಿಸುವಿಕೆ ಅಗತ್ಯವಾಗಿದ್ದು, ಸಮಾಜದ ಸಮಸ್ತ ಹಿರಿಯರು, ಮುಖಂಡರು, ತಾಯಂದಿರು, ಸಹೋದರರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಸಮಾಜದ ಹಿತಾಸಕ್ತಿ, ಭವಿಷ್ಯದ ಯೋಜನೆಗಳು ಹಾಗೂ ಸಂಘಟನೆ ಬಲವರ್ಧನೆ ಕುರಿತ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.