ಸಂಕನೂರರಿಗೆ ಎಂಎಲ್ಸಿ ಯಾಗಿ ನೇಮಿಸಲು ವೀರಶೈವ ಸಮಾಜದ ಮುಖಂಡರ ಮನವಿ
ವೀರಶೈವ ಸಮಾಜದ ಮುಖಂಡ ಹಾಗೂ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಶರಣಗೌಡ ಪಾಟೀಲ್ ಸಂಕನೂರ್ ಸಮಾಜದ ಅಭಿವೃದ್ಧಿ ಮತ್ತು ಪಕ್ಷದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸುಮಾರು 35 ವರ್ಷಗಳಿಂದ ಪಕ್ಷದಲ್ಲಿದ್ದು ಯಾವುದೇ ನಿಗಮದ ಸದಸ್ಯರನ್ನಾಗಿ ಇವರಿಗೆ ಆಯ್ಕೆಗೊಳಿಸಿಲ್ಲ. ಆದಕಾರಣ ಜೂನ್ ನಲ್ಲಿ ಎಂಎಲ್ಸಿ ಸ್ಥಾನಕ್ಕಾಗಿ ಶರಣಗೌಡ ಪಾಟೀಲ್ ಸಂಕನೂರರನ್ನು ನೇಮಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಯವರಿಗೆ ವೀರಶೈವ ಮುಖಂಡರು ಮನವಿ ಮಾಡಿದ್ದಾರೆ.