ದೇವನಹಳ್ಳಿ: ಗಂಗಾ ತಾಯಿಯ 56ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು
ದೇವನಹಳ್ಳಿ ತಾಲೂಕು, ವಿಜಯಪುರ ಪಟ್ಟಣದಲ್ಲಿ ಗಂಗಾ ತಾಯಿಯ 56ನೇ ವರ್ಷದ ಜಾತ್ರಾ ಮಹೋತ್ಸವ 12.05.2026 ಮಂಗಳವಾರ ಭಕ್ತಿ ಭಾವ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೀಪಾರತಿ ಬೆಳಗುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕರು ಎಲ್ಲ ಭಕ್ತರಿಗೂ ಸಮಾನ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸತ್ಯಮ್ಮ ತಾಯಿ ಹಾಗೂ ದುರ್ಗಾಪರಮೇಶ್ವರಿ ತಾಯಿಯರಿಗೂ ಭಕ್ತರು ಆರತಿ ಸಲ್ಲಿಸಿ ಹರಿಕೆಗಳನ್ನು ತೀರಿಸಿದರು. ಗ್ರಾಮಸ್ಥರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.