ಕಲಬುರಗಿ-ಬೆಂಗಳೂರು ವಿಮಾನ ಸೇವೆ ಮರು ಆರಂಭಕ್ಕೆ ಒಪ್ಪಿಗೆ ಸ್ವಾಗತ
ಕಲಬುರಗಿ: ರಾಜ್ಯ ಸರ್ಕಾರ ಕಲಬುರಗಿ-ಬೆಂಗಳೂರು ವಿಮಾನಸೇವೆಯನ್ನು ಮರು ಆರಂಭಿಸುವ ನಿರ್ಧಾರವನ್ನು ಕೈಗೊಂಡಿದ್ದು, ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ ಹಾಗೂ ಕಾರ್ಯದರ್ಶಿ ಶಿವರಾಜ್ ಇಂಗನ್ ಶೆಟ್ಟಿ ಸ್ವಾಗತಿಸಿದ್ದಾರೆ.ಶರಣು ಪಪ್ಪಾ ಮತ್ತು ಶಿವರಾಜ್ ಇಂಗನ್ ಶೆಟ್ಟಿ ವಿಮಾನ ಪ್ರಯಾಣ ದರವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವ ಕುರಿತು ಒತ್ತಾಯಿಸಿದ್ದಾರೆ. ಮುಂಬೈ, ಅಹ್ಮದಾಬಾದ್, ತಿರುಪತಿ, ಮಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಇತರ ನಗರಗಳಲ್ಲಿಯೂ ವಿಮಾನ ಸೇವೆಯನ್ನು ವಿಸ್ತರಿಸುವುದಕ್ಕೆ ಆಗ್ರಹಿಸಿದ್ದಾರೆ.