ಶೀರ್ಷಿಕೆ: ಆಸಾಂ ರಾಜ್ಯ ಮಾದರಿ – ಪೋಷಕರ ಆರೈಕೆ ಭತ್ಯೆಯಲ್ಲಿ 15% ಕಟ್: ಕರ್ನಾಟಕದಲ್ಲೂ ಜಾರಿಗೆ ಆಗಬೇಕೆಂಬ ಬೇಡಿಕೆ.
ಆಸಾಂ ರಾಜ್ಯದಲ್ಲಿ ಪೋಷಕರನ್ನು ನೋಡಿಕೊಳ್ಳುವ ವಿಷಯದಲ್ಲಿ ಹೊಸ ರೀತಿಯ ಕ್ರಮ ಗಮನ ಸೆಳೆಯುತ್ತಿದೆ. ಸರ್ಕಾರಿ ನೌಕರರು ತಮ್ಮ ಪೋಷಕರ ಆರೈಕೆಯನ್ನು ಸರಿಯಾಗಿ ಮಾಡದಿದ್ದರೆ, ಅವರ ವೇತನದಿಂದ ಸುಮಾರು 15 ಶೇಕಡಾ ಮೊತ್ತವನ್ನು ಕಡಿತ ಮಾಡಿ ಪೋಷಕರಿಗೆ ನೀಡುವ ವ್ಯವಸ್ಥೆ ಜಾರಿಗೆ ತಂದಿರುವುದು ಚರ್ಚೆಗೆ ಕಾರಣವಾಗಿದೆ. ಈ ಕ್ರಮದ ಉದ್ದೇಶ ವೃದ್ಧ ಪೋಷಕರಿಗೆ ಆರ್ಥಿಕ ಭದ್ರತೆ ಒದಗಿಸುವುದು ಹಾಗೂ ಮಕ್ಕಳ ಜವಾಬ್ದಾರಿಯನ್ನು ನೆನಪಿಸುವುದಾಗಿದೆ.
ಈ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇದನ್ನು ಉತ್ತಮ ನಿರ್ಧಾರವೆಂದು ಸ್ವಾಗತಿಸಿದ್ದಾರೆ. ಮತ್ತೊಂದೆಡೆ, ವೈಯಕ್ತಿಕ ಕುಟುಂಬ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೀಗ ಇದೇ ರೀತಿಯ ನಿಯಮವನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ವೃದ್ಧಾಪ್ಯದಲ್ಲಿ ಪೋಷಕರ ನಿರ್ಲಕ್ಷ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಕ್ರಮವು ಸಮಾಜದಲ್ಲಿ ಜವಾಬ್ದಾರಿತನ ಹೆಚ್ಚಿಸಬಹುದು ಎಂದು ಸಾಮಾಜಿಕ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದು, ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.
ದಿನಾಂಕ್ :೧೬/೪/೨೬
ಜಿಲ್ಲಾ :ಬೆಳಗಾಂವಿ
ರಿಪೋರ್ಟ್ :ರಾಘವೇಂದ್ರ ಕಲಾಲ್