ಧರ್ಮದ ಹೆಸರಲ್ಲಿ ಅವಹೇಳಿನ ಸಲ್ಲದು
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು , ಸಾರ್ವಜನಿಕ ಸುವ್ಯವಸ್ಥೆ ,ನೈತಿಕತೆ ಆರೋಗ್ಯಕ್ಕೆ ಒಳಪಟ್ಟಿರುತ್ತದೆ ಇದನ್ನು ಮರೆಯಬಾರದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅಭಿಪ್ರಾಯಪಟ್ಟರು. ಹಿಂದೂ ದೇವತೆಗಳು ರಾಜಕೀಯ ನಾಯಕರನ್ನು ಸಿರಾಜುದ್ದೀನ್ ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದ ಆರೋಪದಡಿ ಕ್ರಿಮಿನಲ್ ಪ್ರಕರಣ ಕೈ ಬಿಡಬೇಕೆಂದು ಮನವಿ ಮಾಡಿದ ಹಿನ್ನೆಲೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಮನವಿ ನಿರಾಕರಿಸಿದ್ದಾರೆ.