ವಿಶ್ವ ಸೇವಾ ಸಂಸ್ಥೆಗೆ ಮಹಿಮಾ ಪಟೇಲ್ ಭೇಟಿ ಹೋರಾಟಗಾರ ಕಪಾಟೆ ಉಪಸ್ಥಿತಿ
ಇತ್ತೀಚಿಗೆ ಮಹಾಗಾಂವಗೆ ಜೆಡಿಯು ರಾಜ್ಯಧ್ಯಕ್ಷ ಮಹಿಮಾ ಪಟೇಲ್ ಆಗಮಿಸಿ ಸುಭಾಷ್ ಕಪಾಟೆ ನೇತೃತ್ವದ ಹೋರಾಟದಲ್ಲಿ ಭಾಗವಹಿಸಿ, ನಂತರ ಕಲಬುರಗಿಯ ವಿಶ್ವ ಸೇವಾ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಅಧ್ಯಕ್ಷ ಶ್ರೀ ವಿಶ್ವನಾಥ್ ಸ್ವಾಮೀಜಿ ಅವರೊಂದಿಗೆ ಸಂಸ್ಥೆಯ ಬಗ್ಗೆ ಚರ್ಚಿಸಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಿಮಾ ಪಟೇಲ್ರನ್ನು ಹಾಗೂ ಅವರೊಂದಿಗೆ ಆಗಮಿಸಿದ ಸುಭಾಷ ಕಪಾಟೆಯವರನ್ನು ವಿಶ್ವನಾಥ್ ಸ್ವಾಮೀಜಿ ಸನ್ಮಾನಿಸಿದರು