ಹುಬ್ಬಳ್ಳಿ ಪ್ರಕರಣಕ್ಕೆ ಸಿಐಡಿ ಎಸ್ಪಿ ಶಾಲು ಎಂಟ್ರಿ ಶೀಘ್ರ ವರದಿ ಸಲ್ಲಿಕೆ
ಹುಬ್ಬಳ್ಳಿಯ ಕೇಶ್ವಾಪೂರ ಠಾಣೆಯಲ್ಲಿ ನೋಂದಾಯಿಸಿದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಸ್ತ್ರ ಮತ್ತು ದೌರ್ಜನ್ಯ ಪ್ರಕರಣ, ರಾಜ್ಯದ್ಯಂತ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಎಚ್ಚೆತ್ತ ಕಾಂಗ್ರೆಸ್ ಸರ್ಕಾರ ಎಸ್ ಪಿ ಶಾಲು ನೇತ್ರತ್ವದ ಸಿಐಡಿ ತಂಡಕ್ಕೆ ಪ್ರಕರಣ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಎಫ್ಐಆರ್ ದಾಖಲಾಗಿದ್ದು ಕುಲಂಕುಶ ತನಿಖೆ ನಡೆಸಿ ಪ್ರಕರಣದ ಬುಡಕ್ಕೆ ಹೋಗಿ ಸರ್ಕಾರಕ್ಕೆ ವರದಿ ಒಪ್ಪಿಸಲಾಗುವುದೆಂದು ಎಸ್ ಪಿ ಶಾಲು ಪತ್ರಕರ್ತರಿಗೆ ತಿಳಿಸಿದರು.