logo

ಛಾಯಾಗ್ರಹಕರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು.


ಗೌರಿಬಿದನೂರು: ಛಾಯಾಗ್ರಹಕರು ತಮ್ಮ ವೃತ್ತಿಯ ಜೊತೆಗೆ ಸಂಘಟಿತರಾಗಬೇಕು, ಅಗ ಮಾತ್ರ ಛಾಯಾಗ್ರಹಕರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಆವುಲನ್ನ ಹೇಳಿದರು.

ನಗರದ ನದಿ ದಡದ ಶ್ರೀ ಪ್ರಸನ್ನಾಂಜನೇಯ ಕಲ್ಯಾಣ ಮಂಟಪದಲ್ಲಿ ಛಾಯಾಗ್ರಹಕರು ಸೆ.7 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸಂಘದಿಂದ ನಡೆಯಲಿರುವ ವಿಶ್ವ ಛಾಯಾ ಚಿತ್ರಗ್ರಾಹಕರ ದಿನಾಚರಣೆಯನ್ನು ಹಮ್ಮಿಕೊಂಡಿರುವ ಅಂಗವಾಗಿ ಛಾಯಾಗ್ರಾಹಕರ ಹಬ್ಬದ ಕಾರ್ಯಕ್ರಮಕ್ಕೆ ತೆರಳಲು ವಿಶೇಷ ಸಭೆ ನಡೆಸಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಛಾಯಾಗ್ರಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ತೆರಳಲು ಸಹಕರಿಸುವಂತೆ ಕೋರಿದರು.

ಕೌಶಲ್ಯ ಅಭಿವೃದ್ಧಿ: ವೃತ್ತಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು ,ಛಾಯಾಗ್ರಹಕರು ತಮ್ಮ ಕೌಶಲ್ಯ ಅಭಿವೃದ್ಧಿಯಿಂದ ಗ್ರಾಹಕರನ್ನು ಸೆಳೆಯಬೇಕು, ವಿನಾಕಾರಣ ಪೈಪೋಟಿಗೆ ಮುಗಿಬಿದ್ದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಾರರು, ಕೌಶಲ್ಯತೆಯಲ್ಲಿ ಪೈಪೋಟಿ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ತಿಳಿಸಿದರು.

ಸೌಹಾರ್ಧತೆ: ಛಾಯಾಗ್ರಹಕರು ಸಂಘದ ಸಭೆಗಳಲ್ಲಿ ಭಾಗವಹಿಸುವ ಮೂಲಕ ವೃತ್ತಿ ಪರ ಸಮಸ್ಯೆಗಳನ್ನು ವಿನಿಮಯ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುವುದರ ಜೊತೆಗೆ ಪರಸ್ಪರ ಸೌಹಾರ್ಧತೆ ವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಈ ಸಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ನಂಜುಂಡಬಾಬು, ಸಂಘ ಕಾರ್ಯದರ್ಶಿ ಉಮಾಶಂಕರ್, ಖಜಾಂಚಿ ರವಿಚಂದ್ರ, ಗೌರವಾಧ್ಯಕ್ಷ ಪಣಿಲ್ ಕುಮಾರ್, ಹಿರಿಯ ಛಾಯಾಗ್ರಹಕರಾದ ಅಂಜಿನಪ್ಪ, ಸುರೇಶ್, ಹರೀಶ್, ದೇವಿಮಂಜುನಾಥ್, ಜಯರಾಮೇಗೌಡ,ಶ್ರೀಕಂಠ, ನಾಗರಾಜ್ ಶೆಟ್ಟಿ ಸೇರಿದಂತೆ ಛಾಯಾಗ್ರಹಕರು ಭಾಗವಹಿಸಿದ್ದರು.

ಚಿತ್ರ6ಜಿಬಿಡಿ-2 ಗೌರಿಬಿದನೂರು ನಗರದ ನದಿದಡದ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಸಭೆ ನಡೆಸಿ ಜಿಲ್ಲಾ ಕೇಂದ್ರ ಸೆ.7 ರಂದು ನಡೆಯಲಿರುವ ಛಾಯಾಗ್ರಹಕರ ಹಬ್ಬಕ್ಕೆ ಬೆಂಬಲ ವ್ಯಕ್ತಪಡಿಸಿದರು.

45
3183 views