logo

*ಇಲಕಲ್ ಸರ್ಕಾರಿ ನೌಕರರ ಸಂಘಕ್ಕೆ ಶೀಘ್ರ ನಿವೇಶನ ನೀಡಿ,ನೌಕರರ ಭವನ ನಿರ್ಮಾಣಕ್ಕೆ ಅನುದಾನ ನೀಡುವೆ-ಶಾಸಕರು*

*ಇಲಕಲ್ ಸರ್ಕಾರಿ ನೌಕರರ ಸಂಘಕ್ಕೆ ಶೀಘ್ರ ನಿವೇಶನ ನೀಡಿ,ನೌಕರರ ಭವನ ನಿರ್ಮಾಣಕ್ಕೆ ಅನುದಾನ ನೀಡುವೆ-ಶಾಸಕರು*

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಇಲಕಲ್ ತಾಲೂಕು ಶಾಖೆಯ ನೂತನ ಕಾರ್ಯಾಲಯ ಉದ್ಘಾಟನೆಯನ್ನು ಮಾಡಿ ಮಾತನಾಡಿದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ರವರು ಇಲಕಲ್ ಸರ್ಕಾರಿ ನೌಕರರ ಸಂಘಕ್ಕೆ ಶೀಘ್ರ ನಿವೇಶನ ನೀಡಿ,ನೌಕರರ ಭವನ ನಿರ್ಮಾಣಕ್ಕೆ ಅನುದಾನ ನೀಡುವೆ ಎಂದರು.

ಇಲಕಲ್ ಡಯಟ್ ಆವರಣದಲ್ಲಿರುವ ತಾಲೂಕು ಪಂಚಾಯತ್ ಪಕ್ಕದಲ್ಲಿರುವ ಕಟ್ಟಡದಲ್ಲಿ ನೂತನ ಕಾರ್ಯಾಲಯ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾoಗ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸುಭದ್ರವಾದ ಆಡಳಿತ ಕೊಡಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮ ಚಟುವಟಿಕೆಗಳು ಮಾದರಿಯಾಗಿದೆ ಹಾಗೂ ಇಳಕಲ್ ತಾಲೂಕು ಶಾಖೆ ರಚನೆಯಾದ ನಂತರ ನವೀನ ಕಾರ್ಯ ಹಮ್ಮಿಕೊಂಡಿದ್ದು ಈಗ ಕೇವಲ ಸಂಘದ ಕಚೇರಿ ಅಷ್ಟೇ ಅಲ್ಲದೆ ಸರ್ಕಾರಿ ನೌಕರರ ಕಾರ್ಯದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವಾಲಿಬಾಲ್ ಅಂಗಣ,ಶಟಲ್ ಬ್ಯಾಂಡ್ಮಿಂಟನ್ ಅಂಗಣ,ಕೇರಂ,ಚೆಸ್ ವ್ಯವಸ್ಥೆ ಮಾಡಿದ್ದು ವಿಶೇಷವಾಗಿದೆ ಎಂದರು ಹಾಗೂ ಶೀಘ್ರದಲ್ಲಿ ಇಳಕಲ್ ಸರ್ಕಾರಿ ನೌಕರರ ಸಂಘಕ್ಕೆ ಉತ್ತಮವಾದ ನಿವೇಶನ ನೀಡಿ, ಸುಸಜ್ಜಿತ ನೌಕರರ ಭವನ ನಿರ್ಮಾಣ ಮಾಡಲು ಅನುದಾನ ನೀಡಲಾಗವುದು ಎಂದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಸಂಘದ ಕಾರ್ಯ ಚಟುವಟಿಗಳಿಗೆ ಸದಾ ಬೆನ್ನೆಲುಬು ಆಗಿರುವ ಶಾಸಕರಿಗೆ ಧನ್ಯವಾದ ತಿಳಿಸಿ ಶೀಘ್ರ ನಿವೇಶನ ದೊರಕಿಸಿ ನೌಕರ ಭವನ ನಿರ್ಮಿಸಲು ಮನವಿ ಮಾಡಿದರು ಹಾಗೂ ತಾಲೂಕಿನ ಪ್ರತಿಯೊಬ್ಬ ಸರ್ಕಾರಿ ನೌಕರರು ಸಂಘದ ಕಚೇರಿಗೆ ಭೇಟಿ ನೀಡಿ ಇಲ್ಲಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು.

ಇದೆ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು.
ಮಾನ್ಯ ಶಾಸಕರು ವಾಲಿಬಾಲ್ ಸರ್ವ್ ಮಾಡುವುದರ ಮೂಲಕ ಹಾಗೂ ಶಟಲ್ ಬ್ಯಾಂಡ್ಮಿಂಟನ್ ಆಡುವುದರ ಮೂಲಕ ವಾಲಿಬಾಲ್ ಅಂಗಣ,ಶಟಲ್ ಬ್ಯಾಂಡ್ಮಿಂಟನ್ ಅಂಗಣ ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ,ತಹಶೀಲ್ದಾರ ಅಮರೇಶ ಪಮ್ಮಾರ,ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಸೋಮಲಿಂಗಪ್ಪ ಅಂಟರತಾನಿ,ಹಿರಿಯರಾದ ಬಸವರಾಜ ಶಿರೂರ,ಜಿಲ್ಲಾ ಕಾರ್ಯದರ್ಶಿ ವಿಠ್ಠಲ್ ವಾಲಿಕಾರ, ಖಜಾಂಚಿ ಗೋಪಾಲ ನೀಲನಾಯಕ,ರಾಜ್ಯ ಪರಿಷತ್ ಸದಸ್ಯ ಈಶ್ವರ ಗಡ್ಡಿ, ಕಾರ್ಯದರ್ಶಿ ಸಂಗಮೇಶ ಬಂಗಾರಿ, ಖಜಾಂಚಿ ಶರಣು ಕೊಣ್ಣೂರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನೌಕರರ ಸಂಘ, ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು, ಸರಕಾರಿ ನೌಕರರು, ಶಿಕ್ಷಕರ ಬಳಗ ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

20
2778 views