
ಸಂಸದ ಡಾ.ಕೆ.ಸುಧಾಕರ್ ಅವರಿಂದ ಗೌರಿಬಿದನೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*
*ಲೋಕಸಭಾ ಸದಸ್ಯರಾದ ಡಾ. ಕೆ ಸುಧಾಕರ್ ಅವರಿಂದ ಗೌರಿಬಿದನೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*
ಗೌರಿಬಿದನೂರು ತಾಲೂಕಿನಲ್ಲಿ 12 ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ನೀಡಲಾಗಿರುತ್ತದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಾ. ಕೆ ಸುಧಾಕರ್ ಅವರು ತಿಳಿಸಿದರು.
ಶುಕ್ರವಾರ ಗೌರಿಬಿದನೂರು ನಗರದ ನಗರಸಭೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಐ, ಮ್ಯಾಕ್ಸ್ ದೀಪಗಳನ್ನು ಅಳವಡಿಸುವಿಕೆ ಸೇರಿದಂತೆ ಗ ಒಟ್ಟು 12 ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಗೌರಿಬಿದನೂರು ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈ ಮಾಸ್ ದೀಪಗಳನ್ನು ಅಳವಡಿಸುವ ಒಟ್ಟು 12 ಕಾಮಗಾರಿಗಳನ್ನು ಕೈಗೊಳ್ಳಲು ರೂ 52.0 ಲಕ್ಷಗಳ ಅನುದಾನ ನೀಡಲಾಗಿರುತ್ತದೆ.
ಕೇಂದ್ರ ರಸ್ತೆ ನಿಧಿ (CRF) ರಾಷ್ಟ್ರೀಯ ಹೆದ್ದಾರಿ -94 ರಿಂದ ನಕ್ಕಲಹಳ್ಳಿ ಕಾತನಕಲ್ಲು ಜಿಲಾಕುಂಟೆ ಮಾರ್ಗವಾಗಿ ನಗರಗೆರೆ ಸೇರುವ 8.0 ಕಿ.ಮೀ ರಸ್ತೆ ಅಭಿವೃದ್ಧಿಗಾಗಿ ರೂ 6.0 ಅನುದಾನ ನೀಡಲಾಗಿರುತ್ತದೆ.
ಜಲ ಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿನಾದ್ಯಂತ 296 ಗ್ರಾಮಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದ್ದು ಇದಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದ 102.50 ಕೋಟಿ ಅನುದಾನ ನೀಡಲಾಗಿರುತ್ತದೆ ಎಂದು ತಿಳಿಸಿದರು.
2024-25 ನೇ ಸಾಲಿನ, ಅಮೃತ್ 2.0 ಯೋಜನೆಯಡಿ ಗೌರಿಬಿದನೂರು ನಗರ ನೀರು ಸರಬರಾಜು ಕಾಮಗಾರಿಗೆ ರೂ 66.60 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ.ರಾಷ್ಟ್ರೀಯ ಹೆದ್ದಾರಿ-69 ಮಧುಗಿರಿ - ಮುಳಬಾಗಿಲು ರಸ್ತೆ ವಯಾ ಗೌರಿಬಿದನೂರು ಚಿಕ್ಕಬಳ್ಳಾಪುರ ಕಾಮಗಾರಿಯು ಪ್ರಗತಿಯಲ್ಲಿದ್ದು ಇದಕ್ಕಾಗಿ ಕೇಂದ್ರ ಸರ್ಕಾರವು 398.48 ಕೋಟಿ ಅನುದಾನ ಒದಗಿಸಿರುತ್ತದೆ.ಗೌರಿಬಿದನೂರು ಬೈಪಾಸ್ ರಸ್ತೆ (ಗುಂಡಾಪುರ ಮಾರ್ಗವಾಗಿ ) ಅಭಿವೃದ್ಧಿಗೆ ರೂ 40.68 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಪಿ.ಎಂ ಸ್ಥಾನಿಧಿ ಯೋಜನೆಯಡಿ
ಗೌರಿಬಿದನೂರು ನಗರದಾದ್ಯಂತ 558 ಜನ ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ್ದು ಇದಕ್ಕಾಗಿ ರೂ 56.0 ಲಕ್ಷ ಅನುದಾನ ನೀಡಲಾಗಿರುತ್ತದೆ ಎಂದರು.
ಕನಿಷ್ಠ, ಬೆಂಬಲ ಬೆಲೆ ಯೋಜನೆಯಡಿ ಗೌರಿಬಿದನೂರು ತಾಲ್ಲೂಕಿನಲ್ಲಿ 571 ಜನ ರೈತರಿಗೆ ರಾಗಿ ಬೆಳೆಗಾಗಿ ರೂ 3 ಕೋಟಿ ಅನುದಾನ ಒದಗಿಸಿ 8497.50 ಕ್ವೀoಟಲ್ ರಾಗಿಯನ್ನು ಖರೀದಿಸಲಾಗಿದೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದಿ ಆದರ್ಶ ಗ್ರಾಮ ಯೋಜನೆಯಡಿ
ಗೌರಿಬಿದನೂರು ತಾಲ್ಲೂಕಿನಲ್ಲಿ ಮಾಚೇನಹಳ್ಳಿ ಲಕ್ಕಸಂದ್ರ ಹಾಗೂ ದೊಡ್ಡ ಮಲೆಕೆರೆ ಗ್ರಾಮಗಳನ್ನು ಆಯ್ಕೆ ಮಾಡಿದ್ದು 2024-25ನೇ ಸಾಲಿನಲ್ಲಿ ತಲಾ ಒಟ್ಟು 61.14 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿನಗರ ಸಭೆ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ ,
ನಗರಸಭೆ ಆಯುಕ್ತೆ ಗೀತಾ ಡಿ. ಎಂ, ಡಾ. ಶಶಿಧರ್, ರವಿನಾರಾಯರೆಡ್ಡಿ . ಜೆಡ್.ಪಿ ಮೂರ್ತಿ, ನಗರಸಭೆಯ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.