logo

ಎಂಎಸ್ಸಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ನೇಹ.ಎಂ ಗೆ ಅಭಿನಂದನೆ

ಎಂಎಸ್ಸಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ನೇಹ.ಎಂ ಗೆ ಅಭಿನಂದನೆ

ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ ನಿವಾಸಿ ಮುಖಂಡ ಬಾಲಕೃಷ್ಣ ಅವರ ಸಹೋದರಿ ಸೂಲಕುಂಟೆ ಗ್ರಾಮದ ಇಂದ್ರಮ್ಮ ಮತ್ತು ಮುನಿಶಾಮಪ್ಪ ದಂಪತಿಗಳ ಪುತ್ರಿ ನೇಹ.ಎಂ ಬೆಂಗಳೂರು ವಿವಿಯಲ್ಲಿ ಎಂಎಸ್ಸಿ ಗಣಿತ ಶಾಸ್ತ್ರದ ಸ್ನಾತಕೊತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಕೊಂಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ನೇಹ.ಎಂ ಅವರನ್ನು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಅಭಿನಂದಿಸಿದರು.

ನಂತರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಹಳಷ್ಟು ಪ್ರತಿಭೆಗಳಿವೆ. ಪ್ರತಿಭೆಗಳನ್ನು ಗುರ್ತಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವಾಗಬೇಕು. ಇಲ್ಲಿನ ಗ್ರಾಮ ಪ್ರತಿಭೆ ನೇಹ.ಎಂ ಗಣಿತ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುವುದು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಇವರ ಈ ಶ್ರಮ ಮತ್ತಷ್ಟು ಉತ್ತುಂಗದ ಸಾಧನೆಗಳಾಗಬೇಕು ಎಂದು ಪ್ರಾರ್ಥಿಸುತ್ತೇನೆ ಎಂದರು.

ಈ ವೇಳೆ ಕೃಷ್ಣೋದಯ ಕಲ್ಯಾಣ ಮಂಟಪದ ಮಾಲೀಕ ಬಾಲಕೃಷ್ಣ, ಸಹೋದರಿ ಇಂದ್ರಮ್ಮ ಮತ್ತು ಕುಟುಂಬಸ್ಥರು, ಊರಿನ ಮುಖಂಡರು ಇದ್ದರು.

ಚಿತ್ರ: ಬೆಂಗಳೂರು ವಿವಿಯಲ್ಲಿ ಎಂಎಸ್ಸಿ ಗಣಿತ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದ ಸೂಲಕುಂಟೆ ಗ್ರಾಮದ ನೇಹ.ಎಂ. ಅವರನ್ನು ಎಂಎಲ್ಸಿ ನಾಗರಾಜ್ ಯಾದವ್ ಅಭಿನಂದಿಸಿದರು.

31
2506 views