
ಗುಂಪು ಮರದ ಆನಂದ್ ಅವರ 53ನೇ ಹುಟ್ಟುಹಬ್ಬವನ್ನು ಗಿಡಗಳನ್ನು ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು
ಚಿಕ್ಕಬಳ್ಳಾಪುರ: ಗುಡಿಬಂಡೆ ಖ್ಯಾತ ಪರಿಸರವಾದಿಗಳು ಹಾಗೂ ಜಿಲ್ಲಾ ಪರಿಸರ ವೇದಿಕೆಯ ಅಧ್ಯಕ್ಷರು ಆದ ಡಾ. ಗುಂಪು ಮರದ ಆನಂದ್ ಅವರ 53ನೇ ಹುಟ್ಟುಹಬ್ಬವನ್ನು ಗುಡಿ ಬಂಡೆ ಅಂಬೇಡ್ಕರ್ ಪುತ್ತಳಿಕೆಯ ಮುಂಬಾಗದಲ್ಲಿ ಗಿಡಗಳನ್ನು ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕು ಪರಿಸರ ವೇದಿಕೆ ಅಧ್ಯಕ್ಷ ಬಿ ಮಂಜುನಾಥ್ ಮಾತಾಡಿ, ಪರಿಸರವಾದಿ ಡಾ. ಗುಂಪು ಮರದ ಆನಂದ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತಸ ಸುದ್ದಿಯಾಗಿದೆ. ಗುಂಪು ಮರದ ಆನಂದ್ ರವರು ಸುಮಾರು 30 ವರ್ಷಗಳಿಂದ ಮೂರು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ ಗುಡಿಬಂಡೆಗೆ ಹಾಗೂ ಜಿಲ್ಲೆಗೆ ಹೆಸರು ತಂದಿದ್ದಾರೆ. ಅವರು ಯಾವುದೇ ಕಾರ್ಯಾವಾಗಲಿ ಹುಟ್ಟುಹಬ್ಬವಾಗಲಿ, ಮದುವೆಯಾಗಲಿ, ಸಭೆ ಸಮಾರಂಭವಾಗಲಿ ಗಿಡ ನೆಟ್ಟು ಆಚರಿಸುವುದು ಅವರ ವಾ ಡಿಕೆಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರಕೃತಿಯಲ್ಲಿ ಪರಿಸರವಾದಿಗಳಾಗಿ ಲಕ್ಷಾಂತರ ಗಿಡಗಳನ್ನು ನೆಡುವ ಹವ್ಯಾಸವನ್ನು ಇಟ್ಟುಕೊಂಡು ಜಿಲ್ಲೆಯನ್ನು ಹಸಿರುಮಯ ವಾತಾವರಣ ಕಲ್ಪಿಸಲು ಸಹಕಾರಿಯಾಗಿದ್ದಾರೆ, ಜೊತೆಗೆ ಮಕ್ಕಳಿಗೆ ಯುವಕರಿಗೆ ಪರಿಸರ ದಾರಿ ಮೂಡಿಸುವ ಯಶಸ್ವಿಯಾಗಿದ್ದಾರೆ ಜೊತೆಗೆ ಇವರಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಕೂಡ ಲಭಿಸಿದೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುಡಿಬಂಡೆ ಪಟ್ಟಣ ಪಂಚಾಯತಿ ಸದಸ್ಯರಾದ ಬಸೀರ್ ಅಹಮದ್, ಪರಿಸರವಾದಿಗಳಾದ ಶ್ರೀನಾಥ,ಜಿ ಟಿ ಶ್ರೀನಿವಾಸ್, ವೆಂಕಟೇಶಪ್ಪ, ಅದಿನಾರಾಯಣಪ್ಪ, ಸಿಮೆಂಟ್ ಮಧು, ಮುನಿರೆಡ್ಡಿ, ಮನ್ಸೂರ್, ಅಮ್ಜದ್ ಖಾನ್ ರವರಿಗೆ ಗಿಡವನ್ನು ದತ್ತು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಿ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.