logo

ಅನಿತಾ ಲಕ್ಷ್ಮಿ ಕುಟುಂಬದ ಗುಡಿಸಲು ಮನೆಗೆ ಬೆಂಕಿ ಅವಘಡ – ಶಿರಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಹಾಯ

ಶಿರಾ ತಾಲೂಕು, ಜೂನ್ 21:
ಶಿರಾ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಅನಿತಾ ಲಕ್ಷ್ಮಿ ಎಂಬುವರಿಗೆ ಸೇರಿದ ಗುಡಿಸಲು ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಯಿತು. ಈ ಅವಘಡದಲ್ಲಿ ದವಸ ಧಾನ್ಯ, ಬಟ್ಟೆ ಬರೆ, ನಗದು ಸೇರಿದಂತೆ ಎಲ್ಲಾ ವಸ್ತುಗಳು ನಾಶಗೊಂಡು ಕುಟುಂಬ ಸಂಪೂರ್ಣ ನಿರ್ಗತಿಕ ಸ್ಥಿತಿಗೆ ತಲುಪಿದೆ.

ಈ ಹಿನ್ನಲೆಯಲ್ಲಿ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಅವರು ಮಾನವೀಯತೆ ಮೆರೆದಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ಆರ್ಥಿಕ ನೆರವನ್ನು ನೀಡುವುದರ ಮೂಲಕ ಸಹಾನುಭೂತಿ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುದರ್ಶನ್, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ, ಸದಸ್ಯ ಶ್ರೀರಾಮ್, ಪಿಡಿಒ ಕನಕಪ್ಪ, ಮುಖಂಡರು ರಮೇಶ್ ಯಾದವ್, ದೊಡ್ಡಯ್ಯ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅದೇ ವೇಳೆ, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಅನಿತಾ ಲಕ್ಷ್ಮಿ ಕುಟುಂಬಕ್ಕೆ ರೂ. 10,000 ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಈ ಮೂಲಕ ಘಟನೆಯಲ್ಲಿ ಕಳೆದುಕೊಂಡ ಜೀವನೋಪಾಯದ ವಸ್ತುಗಳಿಗೆ ಭಾಗಶಃ ಪರಿಹಾರ ಒದಗಿಸಲಾಗಿದೆ.


5
487 views