logo

*ಜಿಲ್ಲಾ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಕುರಿತು ಅನಂತ್ ಕುಮಾರ್ ಸಮಾಜಸೇವಕ ಆಕ್ರೋಶ*

ಚಿಕ್ಕಬಳ್ಳಾಪುರ: ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಾರ್ವಜನಿಕರ ಅನುಕೂಲ ಮತ್ತು ಅವರ ಆರೋಗ್ಯ ರಕ್ಷಣೆಗಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ಸಮಾಜಸೇವಕರಾದ ಅನಂತ್ ಕುಮಾರ್ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳ ಮತ್ತು ಹೊರರೋಗಿಗಳ ನೋಂದಣಿ ಕಾರ್ಯಾಲಯದ ಬಳಿ ರೋಗಿಗಳ ಜನದಟ್ಟಣೆ ತುಂಬಾ ಹೆಚ್ಚಾಗಿದೆ. ಇಲ್ಲಿ ದಾಖಲೆ ಶುಲ್ಕ ಪಾವತಿಸಲು ಒಂದು ಯುಪಿಐ ಪಾವತಿ ವ್ಯವಸ್ಥೆಯನ್ನು ಅಳವಡಿಸಬೇಕು ಮತ್ತು ಅಲ್ಲಿಯೇ ಒಂದು ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು.

ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಅಂಗವಿಕಲರಿಗೆ ಮತ್ತು ವೃದ್ಧರಿಗೆ ಉತ್ತಮ ಸ್ಥಿತಿಯಲ್ಲಿರುವ ವೀಲ್ಚೇರ್‌ಗಳನ್ನು ಒದಗಿಸಬೇಕು ಮತ್ತು ವೃದ್ಧರಿಗೆ ಸಹಾಯಕ್ಕಾಗಿ ವೀಲ್ಚೇರ್‌ಗಳನ್ನು ತಳ್ಳುವ ನೌಕರರನ್ನು ನಿಯೋಜಿಸಬೇಕು. ಈಗಿರುವ ವೀಲ್ಚೇರ್‌ಗಳ ಗಾಲಿಗಳು ಮುರಿದು ಹೋಗಿವೆ. ಇದರಿಂದ ವೃದ್ಧರು ಮತ್ತು ಅಂಗವಿಕಲರಿಗೆ ತುಂಬಾ ತೊಂದರೆ ಆಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳರೋಗಿಗಳಿಗೆ ಉತ್ತಮ ಗುಣಮಟ್ಟದ ಉಪಹಾರ ಮತ್ತು ಭೋಜನ ನೀಡುವ ವ್ಯವಸ್ಥೆ ಮಾಡಬೇಕು. ವಾರದ ಏಳು ದಿನಗಳ ಉಪಹಾರ ಪಟ್ಟಿ ಹಾಗೂ ಪ್ರತಿದಿನ ನೀಡಲಾಗುವ ಉಪಹಾರದ ತೂಕದ ವಿವರಗಳನ್ನು ಫಲಕದ ಮೂಲಕ ಪ್ರಕಟಿಸಬೇಕು ಎಂಬುದು ನನ್ನ ಅಭಿಪ್ರಾಯ.

0
1220 views