logo

ಉಚಿತವಾಗಿ ಎರಡು ದಿನಗಳ ಮಾರ್ಗದರ್ಶನ ಜಾಗೃತಿ ಹಾಗೂ ಪಿಜಿಸಿಇಟಿ ಕಾರ್ಯಾಗಾರ

ಚಿಕ್ಕಬಳ್ಳಾಪುರ : ಉಚಿತವಾಗಿ ಎರಡು ದಿನಗಳ ಮಾರ್ಗದರ್ಶನ ಜಾಗೃತಿ ಹಾಗೂ ಪಿಜಿಸಿಇಟಿ ಕಾರ್ಯಾಗಾರವನ್ನು ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಇದರ ಸದುಪಯೋಗವನ್ನು ಪಡೆಯಬೇಕೆಂದು ನಾಗಾರ್ಜುನ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು ಚಿಕ್ಕಬಳ್ಳಾಪುರ ನಗರದ ಹೊರವಲಯದ ನಾಗಾರ್ಜುನ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಸಭಾಂಗಣದಲ್ಲಿ ಇದೇ ತಿಂಗಳ 20 ಮತ್ತು 21ರಂದು ಎರಡು ದಿನಗಳ ಕಾಲ ಉಚಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಈ ಕಾರ್ಯದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಹೆಸರಾಂತ ಆಕ್ಟಿವ್ ಕೋಚಿಂಗ್ ಸೆಂಟರ್ ನ ನಿರ್ದೇಶಕ ಮಂಜುನಾಥ ಬಡಗಿ ಪಿಜಿಸಿಇಟಿ 2025 ಎಂಬಿಎ ಎಂಸಿಎ ಪರೀಕ್ಷೆಯ ಕಾರ್ಯಗಾರವನ್ನು ಉಚಿತವಾಗಿ ನಡೆಸಿಕೊಡಲಿದ್ದಾರೆ ಇನ್ನು ಈ ಕಾರ್ಯಗಾರದಲ್ಲಿ ಅವಶ್ಯಕತ ಇರುವ ಎಲ್ಲಾ ಸಾಮಗ್ರಿಗಳನ್ನು ನಮ್ಮ ಸಂಸ್ಥೆಯೇ ಉಚಿತವಾಗಿ ನೀಡಲಿದೆ ಹಾಗೂ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಿಂದ ಅಭ್ಯರ್ಥಿಗಳ ನೋಂದಣಿಯ ಅನುಗುಣವಾಗಿ ಬಂದು ಹೋಗುವ ಉಚಿತ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ, ಇನ್ನು ದಿನಾಂಕ 20. 6.2018ನೇ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6:00 ವರೆಗೆ ಹಾಗೂ 21.6 2025ರ ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4:00 ವರೆಗೆ ಈ ಒಂದು ಕಾರ್ಯಗಾರ ನಡೆಯಲಿ ನಡೆಯಲಿದ್ದು ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕು, ಇದಕ್ಕೆ ವಿದ್ಯಾರ್ಥಿಗಳ ನಿಯಮಿತವೇನು ಇರುವುದಿಲ್ಲ, ಎಷ್ಟೇ ವಿದ್ಯಾರ್ಥಿಗಳು ಬಂದರೂ ಗುಂಪುಗಳನ್ನು ಮಾಡಿ ತರಬೇತಿಯನ್ನು ನೀಡಲಾಗುತ್ತದೆ ಕಾರ್ಯಾಗಾರವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಡಾಕ್ಟರ್ ನಾಗೇಶ್ ಕೆಎನ್, ಪ್ರಾಧ್ಯಾಪಕ ಪ್ರೊಫೆಸರ್ ಲೋಕೆಶ್, ಎಂಬಿಎ ಮುಖ್ಯಸ್ಥೆ ಗೀತಾಂಜಲಿ, ಅಡ್ಮಿಶನ್ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಅವಿನಾಶ್ ಹಾಜರಿದ್ದರು.

4
277 views