ತೀವ್ರ ನಿರಾಸೆ ತಂದ ಸರ್ಕಾರದ ಪಲಾಯನವಾದ .....
ಚಿಕ್ಕಬಳ್ಳಾಪುರ:ಆಂಜನೇಯ ರೆಡ್ಡಿ ಆರ್ ಅಧ್ಯಕ್ಷರು,
ಶಾಶ್ವತ ನೀರಾವರಿ ಹೋರಾಟ ಸಮಿತಿ,
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜೂನ್ 19 ರಂದು ಕರೆದಿದ್ದ ರಾಜ್ಯ ಸಚಿವ ಸಂಪುಟದ ಸಭೆಯನ್ನು ದಿಡೀರ್ ರದ್ದುಗೊಳಿಸಿ ಬಯಲುಸೀಮೆಯ ಜನರ ಭಾವನೆಗಳನ್ನು ದಿಕ್ಕರಿಸಿರುವದನ್ನು ನೀರಾವರಿ ಹೋರಾಟ ಸಮಿತಿಯು ಖಂಡಿಸುತ್ತದೆ. ಕೊನೆಕ್ಷಣದಲ್ಲಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ್ದು ತೀವ್ರ ನಿರಾಸೆ ತಂದಿದೆ, ಬಯಲುಸೀಮೆಯ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದ್ದ ಸರ್ಕಾರವು ಶಾಶ್ವತ ನೀರಾವರಿ ಹೋರಾಟಗಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪಲಾಯನ ಮಾಡಿದ್ದು ಸರಿಯಲ್ಲ, ಸಕಲ ಸಿದ್ಧತೆಗಳಾದ ನಂತರವೂ ನಮ್ಮ ಜಿಲ್ಲೆಗಳ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ,
ಆದರೆ ನಾವು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ *ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಾವರಿ ಬಿಕ್ಕಟ್ಟು / ಸಮಸ್ಯೆಗಳನ್ನು ವಿಸ್ತೃತವಾಗಿ ಚರ್ಚಿಸಲು ಅನುವಾಗುವಂತೆ "ಸಚಿವ ಸಂಪುಟ ಸಭೆಯ ಕಾರ್ಯಕಲಾಪಗಳ" ಪಟ್ಟಿಯಲ್ಲಿ ಸೇರಿಸುವಂತೆ ಕೋರಲಾಗಿದೆ*
ಸಚಿವ ಸಂಪುಟ ಸಭೆ ತೀರ್ಮಾನಗಳನ್ನು ಪರಿಶೀಲಿಸಿ ನೀರಾವರಿ ಹೋರಾಟವನ್ನು ತೀವ್ರಗೊಳಿಸುತ್ತೇವೆ.