ಗೌರಿಬಿದನೂರಲ್ಲಿ ಕಾರು ಮತ್ತು ಬೈಕ್ ಗಳ ನಡುವೆ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು.
ಗೌರಿಬಿದನೂರು ನಗರದ ಮಧುಗಿರಿ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಮುಂಭಾಗ ಬೀಕರ ಅಪಘಾತ.
ಶುಕ್ರವಾರ ರಾತ್ರಿ ಸುಮಾರು 9 ಘಂಟೆ ಸಮಯದಲ್ಲಿ ತುಮಕೂರು ಕಡೆಯಿಂದ ಅತಿ ವೇಗವಾಗಿ ಅಜಾಗರೂಕತೆಯಿಂದ ಬಂದ ಕಾರು
ನಗರದ ಕಡೆಯಿಂದ ಬರುತ್ತಿದ್ದ, 4 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ದ್ವಿಚಕ್ರ ವಾಹನ ಸವಾರರಾದ ಚನ್ನೇನಹಳ್ಳಿ ಗ್ರಾಮದ ನಂಜಪ್ಪ (60) ಮತ್ತು ಕೊಲ್ಕತ್ತಾ ಮೂಲದ ಸೌರವ್ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ಉಳಿದ ಎರಡು ದ್ವಿಚಕ್ರ ವಾಹನ ಸವಾರರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಾಹನ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ, ಪೊಲೀಸರು ಈ ಪ್ರಕರಣವನ್ನು ಗಂಭೀವಾಗಿ ಪರಿಗಣಿಸಿ ತನಿಖೆ ಕೈ ಗೊಂಡಿದ್ದಾರೆ.