logo

ಕೆರೆ ಏರಿ ಒತ್ತುವರಿ ಆರೋಪ ನಂದಿಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಮುಖಂಡನ ವಿರುದ್ಧ ಸಾರ್ವಜನಿಕರ ಆಕ್ರೋಶ

ತುಮಕೂರು, ಹುಳಿಯಾರು: ನಂದಿಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಹಾಗೂ ತಿಮ್ಮಲಾಪುರ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಎನ್.ಬಿ. ದೇವರಾಜು ವಿರುದ್ಧ ಕೆರೆ ಏರಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಾರ್ವಜನಿಕರು ನೀಡಿದ ಮಾಹಿತಿ ಪ್ರಕಾರ, ಸರ್ವೆ ನಂ. 139ರಲ್ಲಿರುವ 38 ಎಕರೆ 33 ಗುಂಟೆ ಪ್ರದೇಶದ ಕೆರೆ ಅಂಗಳವನ್ನು ತಮ್ಮದೇ ಖಾಸಗಿ ಜಾಗವೆಂದು ತಂತಿ ಕಂಬ ಹಾಕಿಸಿಕೊಂಡು ಸಾರ್ವಜನಿಕರ ಓಡಾಟ ಹಾಗೂ ರಸ್ತೆ ಕಾಮಗಾರಿಗೆ ಅಡ್ಡಿ ಸೃಷ್ಟಿಸುತ್ತಿದ್ದಾನಂತೆ.

ಇತ್ತೀಚೆಗಷ್ಟೆ ನಂದಿಹಳ್ಳಿಯಿಂದ ಕಲ್ಲಹಳ್ಳಿ ಮೂಲಕ ಬೆಂಗಳೂರು ಇಂದ ಹೊಸದುರ್ಗ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕರಾದ ಸುರೇಶ್ ಬಾಬು ಗುದ್ದಲಿ ಪೂಜೆ ನೆರವೇರಿಸಿದ್ದು, ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭವಾಗಿದೆ. ಆದರೆ ದೇವರಾಜು ಕಾಮಗಾರಿ ಮುಂದುವರಿಯಲು ಅಡಿಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಿಲ್ಲದೇ ಉಳಿದಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಕೆರೆ ಅಂಗಳವನ್ನು ಖಾಸಗಿ ಸ್ವತ್ತಾಗಿ ಉಪಯೋಗಿಸುವುದು ಕಾನೂನು ಉಲ್ಲಂಘನೆ. ಅಧಿಕಾರಿಗಳು ತ್ವರಿತ ಕ್ರಮ ತೆಗೆದುಕೊಳ್ಳಬೇಕು," ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

10
190 views