ಸೇವಾ ನಿವೃತ್ತಿ ಅಭಿನಂದನಾ ಸಮಾರಂಭ
ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪಿ.ಗಂಗಾದರಪ್ಪ ಅವರ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭ ನಡೆಯಿತು.
ಸೇವಾ ಅಭಿನಂದನೆ ಕಾರ್ಯಕ್ರಮದಲ್ಲಿ ಟಿ.ಗಂಗಾದರಪ್ಪ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಒಂದು ರೀತಿಯಲ್ಲಿ ಸವಾಲಾಗಿರುತ್ತದೆ. ಏನೇ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕೆಲಸ ಮಾಡುವಾಗ ಮೇಲಾಧಿಕಾರಿಗಳಿಂದ ಬೈಗುಳಿ, ಪ್ರಶಂಸೆಗಳು ಇದ್ದೇ ಇರುತ್ತದೆ. ಅಂತಹ ಇಲಾಖೆ ಕಂದಾಯ ಇಲಾಖೆ ಆಗಿದೆ. ಇಲಾಖೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಅದರ ತೃಪ್ತಿ ತಂದಿದೆ. ನನ್ನ ಸಹುದ್ಯೋಗಿಗಳ ಸಹಕಾರವು ಹೆಚ್ಚು ಇದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ತಹಶೀಲ್ದಾರ್ ಬಾಲಕೃಷ್ಣ, ರಾಜೀವಲೋಚನ, ಆರ್.ಐ.ಹನುಮಂತರಾಯಪ್ಪ, ಹೊಸಕೋಟೆ ತಾಲೂಕು ಇಒ ನಾರಾಯಣ ಸ್ವಾಮಿ, ಕಂದಾಯ ಇಲಾಖೆಯ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಶುಭಕೋರಿದರು.