logo

ಹಿರಿಯೂರು ತಾಲ್ಲೂಕು ಬಿಜೆಪಿ ‌ವತಿಯಿಂದ ಮೌನ ಪ್ರತಿಭಟನೆ ನಡೆಸಿದರು

ಹಿರಿಯೂರು ಬಿಜೆಪಿ ವತಿಯಿಂದ ಮೌನ ಪ್ರತಿಭಟನೆ ನಡೆಯಿತು, ಪ್ರತಿಭಟನೆಯಲ್ಲಿ ಹಿರಿಯೂರು ತಾಲೂಕು ಅಧ್ಯಕ್ಷರಾದ ಕೆ ಅಭಿನಂದನ್ ರವರು ಮಾತನಾಡಿ ಕಾಂಗ್ರೆಸ್ ಸರ್ಕಾರದ ನಡೆ ಸರಿಯಿಲ್ಲ ಯಾಕೆಂದರೆ ಬಡವರಿಗೆ ದೊರಕುವ ಜನರಿಕ್ ಔಷಧಿ ಸದುಪಯೋಗ ಆಗುತ್ತಿದ್ದು ಅದನ್ನು ಕೂಡ ನಿಲ್ಲಿಸಬೇಕೆಂದು ಹೊರಟಿರುವ ನಡೆ ಸರಿ ಇಲ್ಲ ಸರ್ಕಾರ ಬಡವರ ನೋವನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಜನರಿಕ್ ಔಷಧಿಯಿಂದ ಎಷ್ಟೊಂದು ಬಡ ಜನರಿಗೆ ಅನುಕೂಲವಿದೆ ಎಂದು ನಮ್ಮ ಬಿಜೆಪಿ ಇದನ್ನು ಮೋದಿಯವರು ತಂದಿದ್ದಾರೆ ಆದರೆ ಅದೇ ಅವರ ಫೋಟೋ ನೋಡಿ ಈ ಔಷಧಿ ಅಂಗಡಿಯನ್ನೇ ನಿಲ್ಲಿಸಬೇಕೆಂದು ಈ ಕುತಂತ್ರ ಕಾಂಗ್ರೆಸ್ ಸರ್ಕಾರ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಪ್ರಶ್ನೆ ಮಾಡಿದರು, ಇದೇ ಸಂದರ್ಭದಲ್ಲಿ ಹಿರಿಯ ರೈತ ಹೋರಾಟಗಾರ ಸಿದ್ರಾಮಣ್ಣರವರು ಬಡವರಿಗೆ ಮಧುಮೇಹ ಕಾಯಿಲೆ ಮತ್ತೆ ಬಡವರಿಗೆ ಕಡಿಮೆ ದರದಲ್ಲಿ ಸಿಗುವಂತಹ ಔಷಧಿ ಅಂಗಡಿಗಳನ್ನು ನಿಲ್ಲಿಸುವುದು ಯಾವ ನ್ಯಾಯ ಕಾಂಗ್ರೆಸ್ ಸರ್ಕಾರದ ನಡೆ ಸರಿ ಇಲ್ಲ ಎಂದು ದೂರಿದರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯು ಸುಂದರ್ ರಾಜ್ ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಮಾರು ಜನರಿಕ್ ಔಷಧಿ ಕ್ಕೇಂದ್ರ ಬಂದಾಗಿನಿಂದ ಎಷ್ಟೋ ಜನಕ್ಕೆ ಅನುಕೂಲವಾಗಿದೆ ನಮ್ಮ ರೆಡ್ ಕ್ರಾಸ್ ಸಂಸ್ಥೆಯು ಕೂಡ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡಿಕೊಂಡು ಹೋಗುತ್ತಾ ಇದೆ ಅಂತಹದರಲ್ಲಿ ಇಂತಹ ಒಳ್ಳೆಯ ಜನೆರಿಕ್ ಔಷಧಿ ಅಂಗಡಿಗಳನ್ನು ನಿಲ್ಲಿಸುವುದು ಯಾವ ನ್ಯಾಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ಹಾಲಪ್ಪ ಮಸ್ಕಲ್ಮಟ್ಟಿ ರಾಘವೇಂದ್ರ ಬಿಜೆಪಿ ಹಿರಿಯ ಮುಖಂಡರು ರಾಕೇಶ್ ವಿಕೆಗುಡ್ಡ ರಾಯಣ್ಣ ಕೇಶವಮೂರ್ತಿ ಬಿಜೆಪಿ ರಾಜಪ್ಪ ಶ್ರೀನಿವಾಸ್ ಆಲೂರು ಕೃಷ್ಣಪ್ಪ ಮ್ಯಾಕ್ಲೂರಲ್ಲಳಿ ಇನ್ನು ಹಲವು ಕಾರ್ಯಕರ್ತರು ಭಾಗವಹಿಸಿದ್ದರು ✍️ಮಹೇಶ್ ಆರ್ ಆಲ್ ಇಂಡಿಯಾ ಮೀಡಿಯಾ

116
2004 views