logo

ಬೆಂಗಳೂರಿನಲ್ಲಿ ಮಳೆಯ ಆವಾಂತರ ಜನಸಾಮಾನ್ಯರಿಗೆ ಸಂಕಟ.

ಇಂದು ಮಧ್ಯಾಹ್ನ ಸುರಿದ ಮಳೆಗೆ ಬೆಂಗಳೂರಿನ ಬಹುತೇಕ ರಸ್ತೆಗಳು ಕೆರೆಗಳಂತೆ ತುಂಬಿ ತುಳುಕುತ್ತಿವೆ. ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಇದಕ್ಕೆಲ್ಲಾ ಕಾರಣ. ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೇಳುತ್ತಾ ಅಧಿಕಾರ ಹಿಡಿದ ಕಾಂಗ್ರೇಸ್ ಪಕ್ಷ, ಮಳೆಯ ನೀರು ಹೊಗಲು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ, ಹವಾಮಾನ ಇಲಾಖೆ ಎಚ್ಚರಿಸಿದರು ಕೂಡ ಬಿಬಿಎಂಪಿ ನಿರ್ಲಕ್ಷ ಇಂದಿನ ಈ ಸ್ಥಿತಿಗೆ ಕಾರಣ.
ಬೆಂಗಳೂರು ಈಗ ವಾಟರ್ ಬೆಂಗಳೂರು ಆಗುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ. ಇನ್ನಾದರೂ ಸರ್ಕಾರ, ಬಿಬಿಎಂಪಿ ಇಚ್ಛೆತ್ತು ಇದಕ್ಕೆ ತಜ್ಞರ ತಂಡವನ್ನು ನೇಮಿಸಿ ಇದಕ್ಕೆ ಒಂದು ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕು. ಸುಮ್ಮನೆ ರಾಜಕೀಯದ ಮಾತುಗಳನ್ನು ಆಡುತ್ತ ಕಾಲಕಳೆಯುವುದು ಸರಿಯಲ್ಲ. ಬಿಜೆಪಿ ಏನು ಮಾಡಲಿಲ್ಲ ಎಂದು ಆರೋಪ ಮಾಡುವ ಸರ್ಕಾರದ ಪ್ರತಿನಿಧಿಗಳಿಗೆ ನೆನಪಿರಲಿ ಅದಕ್ಕೆ ಬಿಜೆಪಿಯನ್ನು ಸೋಲಿಸಿ ತಮಗೆ ಅಧಿಕಾರ ನೀಡಿರುವುದು ಎಂಬುದು ನೆನಪಿರಲಿ.

14
1836 views