logo

ಗೌರಿಬಿದನೂರಿನಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತೋತ್ಸವ ಆಚರಣೆ.

ಗೌರಿಬಿದನೂರಿನಲ್ಲಿ ವಿಜೃಂಭಣೆಯ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತೋತ್ಸವ
ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಧರ್ಮ , ಸಂಸ್ಕಾರವನ್ನು ಕಲಿಸಬೇಕು: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಾಹಾ ಸ್ವಾಮೀಜಿ ಕರೆ
ಗೌರಿಬಿದನೂರು
ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಧರ್ಮ , ಸಂಸ್ಕøತಿ, ಸಂಸ್ಕಾರವನ್ನು ಕಲಿಸುವಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಕರೆನೀಡಿದರು.
ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಬಸವ ಜಯಂತೋತ್ಸವ ಆಚರಣಾ ಸಮಿತಿ ಮತ್ತು ವೀರಶೈವ ಸೇವಾ ಸಮಿತಿ ಮತ್ತು ಇತರೆ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಲಿಂಗಾಯಿತ ಸಮುದಾಯವನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿ ಮುನ್ನೆಲೆಗೆ ತಂದರು ಎಂದ ಅವರು, ಪೋಷಕರು ತಮ್ಮ ಮಕ್ಕಳನ್ನು ಆಚಾರವಂತರನ್ನಾಗಿಸಿದಾಗ ಅವರ ಮುಂದಿನ ಬದುಕು ಉಜ್ವಲ ಭವಿಷ್ಯತ್ತಿನ ಜೊತೆಗೆ ಬದುಕು ಹಸನಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಸವ ಜಯಂತೋತ್ಸವಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಬಸವಣ್ಣನವರ ವಚನಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾನವೀಯತೆಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ಪದ್ದತಿ, ಮೇಲು ಕೀಳು ಮನೋಬಾವನೆಯ ಅಂದಕಾರದಲ್ಲಿದ್ದ ಸಮಾಜಕ್ಕೆ ಸಮಸಮಾಜದ ಬೆಳಕನ್ನು ಚಲ್ಲಿದ ಮಹಾ ಮಾನವತಾವಾದಿ ಬಸವಣ್ಣನವರು ಎಂದ ಅವರು, ಬ್ರಾಹ್ಮಣ ಸಮುದಾಯದ ಮಡಿವಂತಿಕೆಯನ್ನು ಬಿಟ್ಟು ವೀರಶೈವ ಲಿಂಗಾಯಿತ ಧರ್ಮಕ್ಕೆ ಪಾದಾರ್ಪಣೆ ಮಾಡಿ ಅನುಭವ ಮಂಟಪದ ಮೂಲಕ ಸಮಸಮಾಜ ನಿರ್ಮಾಣಕ್ಕೆ ಅಂದೇ ನಾಂದಿ ಹಾಡಿದರು ಎಂದು ತಿಳಿಸಿದರು.
ಅನುಭವ ಮಂಟಪ: 12ನೇ ಶತಮಾನದಲ್ಲಿ ಇಂದಿನ ಪಾರ್ಲಿಮೆಂಟ್ ಮಾದರಿಯಲ್ಲಿ ಜಾತ್ಯಾತೀತವಾಗಿ ಅನುಭವ ಮಂಟವನ್ನು ಮಾಡಿಕೊಂಡು ತಮ್ಮ ಹಾಗೂ ಶರಣರ ವಚನಗಳ ಮೂಲಕ ಕಂದಾಚಾರ,ಮೂಡನಂಬಿಕೆ ಹಾಗೂ ಅಸ್ಪಶೃತೆಯನ್ನು ಹೋಗಲಾಡಿಸಲು ಶ್ರಮಿಸದ ಬಸವಣ್ಣನವರ ವಚನಗಳು ಸರ್ವಕಲಾಲಕ್ಕೂ ವಿಶ್ವಕ್ಕೇ ಪ್ರಸ್ತುತವಾಗಿದೆ, ದೇಶ ವಿದೇಶಗಳಲ್ಲೂ ಬಸವಣ್ಣನವರನ್ನು ಪೂಜಿಸಲಾಗುತ್ತಿದೆ, ಪ್ರತಿಯೊಬ್ಬರೂ ಮಾನವೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಬದುಕು ಮತ್ತು ಭವಿಷ್ಯತ್ತು ಉಜ್ವಲವಾಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರು ಬಸವಣ್ಣನವ ವಚನಗಳನ್ನು ಪಠಿಸುವ ಮೂಲಕ ಸಮುದಾಯದವರ ಪ್ರಸಂಶೆಗೆ ಪಾತ್ರರಾದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಸವಾಪುರ ಮಹೇಶ್ ಮಾತನಾಡಿ ಸಮುದಾಯದವರು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಿದೆ ಎಂದ ಅವರು ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವಂತೆ ಅ.ಭಾ.ವೀ.ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿದರು, ನಗರದಲ್ಲಿ ನಿವೇಶನ ರಹಿತರಿಗೆ ನಿವೇಶನ ಸಮುದಾಯಕ್ಕೆ ಪ್ರತ್ಯೇಕ ರುದ್ರಭೂಮಿಯನ್ನು ಮಂಜೂರು ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಟಿ.ವಿ.ಮಹೇಂದ್ರ ಮಾತನಾಡಿ,ನಮ್ಮ ಸಮುದಾಯ ರಾಜಕೀಯವಾಗಿ ಹಿಂದುಳಿದಿದ್ದು, ಶಾಸಕರು ನಮ್ಮ ಸಮುದಾಯಕ್ಕೂ ರಾಜಕೀಯ ಪ್ರಾಶಸ್ಥತೆಯನ್ನು ನೀಡುವಂತೆ ಕೋರಿದರು, ಶೀಘ್ರದಲ್ಲೇ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಎಸ್.ಪತ್ರಿ,ವೀರಶೈವ ಸೇವಾ ಸಮಿತಿ ಅಧ್ಯಕ್ಷ ಟಿ.ಎಂ.ಚಿಕ್ಕಣ್ಣ, ಅ.ಭಾ.ವೀ.ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ, ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ ಮಾತನಾಡಿದರು.
ಶೋಭಾ ಯಾತ್ರೆ: ಕಾರ್ಯಕ್ರಮಕ್ಕೂ ಮುನ್ನ ನಗರದ ರಾಜಬೀದಿಗಳಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರದೊಂದಿಗೆ , ಮಹಿಳೆಯರು ಪೂರ್ಣ ಕಳಶಗಳೊಂದಿಗೆ ,ಜಾನಪದ ಕಲಾತಂಡಗಳೊಂದಿಗೆ ಸಮುದಾಯದವರು ಮೆರವಣಿಗೆ ನಡೆಸಿದರು, ಮೆರವಣಿಗೆಯ ಬಸವಣ್ಣನವ ಭಾವುಟಗಳು ರಾರಾಜಿಸುತ್ತಿದ್ದವು.ಮೆರವಣಿಗೆಯಲ್ಲಿ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ರವರುಗಳು ಮೆರವಣಿಗೆಯಲ್ಲಿ ಸಾಗಿ ಬಂದಿದ್ದು ವಿಶೇವಾಗಿತ್ತು.
ಕಾರ್ಯಕ್ರಮದಲ್ಲಿ ಬಸವ ಜಯಂತೋತ್ಸವ ಸಮಿತಿಯ ಮೃತ್ಯುಂಜಯಣ್ಣ, ಮುದ್ದುವೀರಪ್ಪ, ಬಸವರಾಜು, ಜಿಮ್‍ಹರೀಶ್, ರೇವಣ ಸಿದ್ದೇಶ್ವರ, ಬಸವರಾಜು, ರುದ್ರಮ್ಮ, ಆರ್.ಮಂಜುನಾಥ್, ಎನ್.ಆರ್.ರವಿಕುಮಾರ್, ಶಶಿಧರ್, ಡಾ.ಸಿ.ನಾಗರತ್ನ, ಆಶಾ, ಗೌರೀಶ್, ವೀರಶೈವ ಸೇವಾ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್, ಉಪಾಧ್ಯಕ್ಷ ಉಮಾದೇವಿ, ಖಜಾಂಚಿ ನಂಡುಂಡಪ್ಪ ಹಾಗೂ ನಿರ್ದೇಶಕರುಗಳು ಭಾಗವಹಿಸಿದ್ದರು.

27
2109 views