ಮಂಗಳಮುಖಿಯರಿಗೆ ಅನ್ಯಾಯ..!
ಚಾಮರಾಜನಗರ ತಾಲ್ಲೂಕಿನ ಯಾನಗಹಳ್ಳಿ ಗ್ರಾಮದ ಲಿಂಗತ್ವ ಅಲ್ಪಸಂಖ್ಯಾತರಾದ ದೇವಿ ಎಂಬುವವರಿಗೆ ಜಮೀನಿನ ವಿಚಾರವಾಗಿ ಪದೇ ಪದೇ ತೊಂದರೆ ನೀಡುತ್ತಿದ್ದ ಅಚ್ಚಟ್ಟಿಪುರ ಗ್ರಾಮದ ವೇಲುಸ್ವಾಮಿ ಹಾಗೂ ಇತರರ ಮೇಲೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು,ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರೆಲ್ಲಾ ಸೇರಿಕೊಂಡು ಮಾಧ್ಯಮದ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದರು.ವರದಿ:ನವೀನ್ ಗರುಡ.