logo

*ಹದಗೆಟ್ಟ ರಸ್ತೆ.ಸಂಚಾರ ಅಸ್ತವ್ಯಸ್ತ.ಗೋಳು ಯಾರು ಕೇಳೋರು....

ಚಿತ್ತಾಪೂರ:  ಚಿತ್ತಾಪೂರ ಪಟ್ಟಣದ ಓವರ್ ಬ್ರಿಡ್ಜ್ ಎಡಕ್ಕೇ ಮನೆಯವರು ರಸ್ತೆಯ ಮೇಲೆ ಕಲ್ಲುಗಳನ್ನು ಹಾಕಿ ರಸ್ತೆ ತಡೆಹಿಡಿದ್ದಿದ್ದಾರೆ ಮೊಗಲಾ ಗ್ರಾಮಕ್ಕೆ ಯಾವ ರಸ್ತೆ ಇಂದ ಹೋಗಬೇಕು.
ಪಟ್ಟಣದಿಂದ- ಮೊಗಲಾ ಗ್ರಾಮ ಮತ್ತು ಇನ್ನೊಂದು ಕಡೆ ಮೊಗಲಾ ತಾಂಡಾ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಕಳೆದ 7-8 ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಆಗಿದ್ದು, ಮತ್ತು ಐದು- ಆರು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು ಮೊಗಲಾ ಗ್ರಾಮಕ್ಕೆ ಸೇರುವ ವರೆಗೂ ಸಹ ಅಲ್ಲಲ್ಲಿ ನೂರಾರು ಗುಂಡಿ ಬಿದ್ದು ರಸ್ತೆಯೊ ಗುಂಡಿಯೋ ಎಂಬ ಅನುಮಾನ ಕೆಲವರಲ್ಲಿ ಕಾಡತೊಡಗಿದೆ.  ಹಾಗೂ ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಅದಲ್ಲದೇ, ದಿನಾಲು ಒಂದಲ್ಲ ಒಂದು ಅಪಘಾತಗಳು ನಡೆಯುತ್ತಿರುವುದರಿಂದ' ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ, ಇದರಿಂದ ವಾಹನ ಬಸ್ ಓಡಾಟದ ಸಂಖ್ಯೆಯು ಸಹ ಕಡಿಮೆ.

ಮೊಗಲಾ ಗ್ರಾಮದಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಇನ್ನೊಂದು ಕಡೆ ಹಳ್ಳದ ಗೋಡೆ ಕುಸಿದು ಬಿದ್ದಿದೆ ರೈತರು ತಮ್ಮ ತಮ್ಮ ಹೊಲ ಗದ್ದೆಗಳಿಗೆ ಇದೆ ಮಾರ್ಗದಿಂದ ಸಂಚರಿಸುತ್ತಾರೆ ಇಲ್ಲಿ ಹಳ್ಳದ ನೀರು ಮತ್ತು ಮಳೆಯ ನೀರು ರಸ್ತೆ ಮೇಲೆ ನಿಲ್ಲುತ್ತವೆ ಎತ್ತು ಬಂಡಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಇಲ್ಲಿಂದ ಹೋಗಲು ಕಷ್ಟಕರವಾಗುತ್ತಿದೆ

ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಇಷ್ಟೆಲ್ಲ ಗುಂಡಿ ಮಯವಾಗಿದ್ದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಿಸುವ ಹಾಗೂ ರಸ್ತೆ ನವೀಕರಣ ಕಾಯಕಕ್ಕೆ ಕೈ ಹಾಕಿಲ್ಲ ಮತ್ತು ಯಾವ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವರೇಗೂ ಕಾದು ನೋಡಬೇಕಾಗಿದೆ. ಎಂದು ಗ್ರಾಮಸ್ಥರು ಆಗ್ರಹಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಐಟಂ ಬಾಕ್ಸ
ತಾಲೂಕಿನ ಚಿತ್ತಾಪೂರ ಪಟ್ಟಣದಿಂದ ಮೊಗಲಾ ಗ್ರಾಮಕ್ಕೆ ಇನ್ನೊಂದು ಕಡೆ ಮೊಗಲಾ ತಾಂಡಾ ಕ್ಕೆ ಸೇರುವ ವರೆಗೂ ರಸ್ತೆ ಕಿತ್ತು ಗುಂಡಿ ಮಯವಾಗಿದ್ದರೂ ಮತ್ತು ಬಿರುಕು ಬಿಟ್ಟಿದ್ದರು,  ಸಹ ಗುಂಡಿಕಷ್ಟವಾಗಿದೆ ಇಷ್ಟೆಲ್ಲ ಗುಂಡಿ ಮಯವಾಗಿದ್ದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಿಸುವ ಹಾಗೂ ರಸ್ತೆ ನವೀಕರಣ ಕಾಯಕಕ್ಕೆ ಕೈ ಹಾಕಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ ಮುಚ್ಚುವ ಕೆಲಸಕ್ಕೆ ಯಾರು ಕೈ ಹಾಕುವ ಲಕ್ಷಣ ಕಾಣುತ್ತಿಲ್ಲ. ಅನುಮಾನ ಗ್ರಾಮಸ್ಥರಲ್ಲಿ ಕಾಡತೊಡಗಿದೆ

ಅನಿಲ್ ಪೊಲೀಸ್ ಪಾಟೀಲ್, ಗುರು ಸ್ವಾಮಿ ಹಿರೇಮಠ್, ರಾಜು ಗುತ್ತೇದಾರ್, ನಾಗೇಶ್ ವಿಶ್ವಕರ್ಮ, ಶಿವಾನಂದ್ ವಿಶ್ವಕರ್ಮ, ಸುಭಾಷ್ ಹಡಪದ್, ರಹಿಮೊದ್ದೀನ್, ರಾಮಲಿಂಗ ಪೂಜಾರಿ, ಸಾಬಣ್ಣ, ರೇವಣಸಿದ್ಧ ಪೂಜಾರಿ, ರಾಕೇಶ್ ಇವಣಿ, ರಾಮು ತಳವಾರ್, ಇಸು ಲಕ್ಕನೋರ್, ವೀರೇಶ್ ಅಲ್ಲೂರಕರ್, ರಾಮು ಪಾಟೀಲ್, ನಾಗು ಹೂಗಾರ್, ಶೇಖಪ್ಪ ಪೊಲೀಸ್ ಪಾಟೀಲ್, ನಾಗರಾಜ್ ಪೊಲೀಸ್ ಪಾಟೀಲ್, ರಾಮು ಸರಡಗಿ, ದೆವು ಲಕ್ಕನೂರ್, ದೇವು ಪಂಚಾಲ್, ಮಲ್ಲು ಪೂಜಾರಿ, ಮಹಾಂತೇಶ್, ಪ್ರಕಾಶ್ ಸ್ವಾಮಿ, ನಾರಾಯಣ ಗುತ್ತೇದಾರ್, ರಮೇಶ್ ಪೂಜಾರಿ, ಸಾಬಣ್ಣ ದೊರೆ ಮತ್ತು ಇನ್ನಿತರರು ಉಪಸ್ಥಿತರಿದ್ದರು.

17
4710 views