logo

ಪತ್ರಕರ್ತ ಮಿತ್ರರಿಗೆ ಅಮರೇಗೌಡ ಮಲ್ಲಾಪೂರ ಇವರಿಂದ ಹೆಲ್ಮೆಟ್ ವಿತರಣೆ

*ತಂದೆ ತಾಯಿ ಸ್ಮರಣಾರ್ಥವಾಗಿ ಪತ್ರಕರ್ತ ಮಿತ್ರರಿಗೆ ಹೆಲ್ಮೆಟ್ ವಿತರಣೆ ಮಾಡಿದ ವನಸಿರಿ ಅಮರೇಗೌಡ ಮಲ್ಲಪೂರ*

ಸಿಂಧನೂರು (pwd ಕ್ಯಾಪ್ ) ನೀರಾವರಿ ಇಲಾಖೆಯ ಅವರಣದಲ್ಲಿರುವ ಅಮರ ಶ್ರೀ ಆಲದ ಮರದ ಹತ್ತಿರ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರ ತಂದೆ ತಾಯಿಯರ ಸವಿನೆನಪಿಗಾಗಿ ಸಿಂಧನೂರಿನ ಎಲ್ಲಾ ಪತ್ರಕರ್ತ ಸ್ನೇಹಿತರಿಗೆ ಜೀವ ರಕ್ಷಕ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ DYSP B.S ತಳವಾರ,ಸಂಚಾರಿ ಪೊಲೀಸ್ ಠಾಣೆಯ PSI ವೆಂಕಟೇಶ ಚವಾಣ್,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಶಿವನಗೌಡ ಗೊರೆಬಾಳ, ಭೀಮಣ್ಣ ಬೆಳಗುರ್ಕಿ, ಸಂತೋಷ ಅಂಗಡಿ, ಸಿದ್ದನಗೌಡ ಗೋನ್ವರ್,ಗಿರಿ ಸ್ವಾಮಿ ಹೆಡಿಗಿನಾಳ, ವೀರಭದ್ರಯ್ಯ ಸ್ವಾಮಿ ತಿಮ್ಮಾಪುರ,ರಾಜು ಪತ್ತಾರ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಚಂದ್ರಶೇಖರ ಪವಾಡಶೆಟ್ಟಿ,ಶರಣಬಸವ ಅರಳಳ್ಳಿ,ಸಾಮಾಜಿಕ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ ಹೊಸಹಳ್ಳಿ ಹಾಗೂ ಎಲ್ಲಾ ಪತ್ರಕರ್ತ ಮಿತ್ರರು ಇದ್ದರು.

ವರದಿ:ಎಸ್. ಎನ್. ವೀರೇಶ
ಸಿಂಧನೂರು.

2
6755 views