ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೇಲೆ ಮಾರಣಾಂತಿಕ ಹಲ್ಲೆ
ಅಭಿಷೇಕ್ ಬ್ಯಾನರ್ಜಿ ಟಿಎಂಸಿ ಪ್ರ.ಕಾರ್ಯದರ್ಶಿ ಬಂಗಾಳದ ಸೋನುಪುರದಲ್ಲಿ ಕಾರ್ಯಕರ್ತನ ಮನೆಗೆ ಸಂಬಂಧಿಗಳನ್ನು ಭೇಟಿ ಮಾಡಲು ಹೋಗುವಾಗ ಗುಂಪೊಂದು ಅವರ ಮೇಲೆ ಹಠಾತ್ತನೆ ಹಲ್ಲೆ ನಡೆಸಿ ತತ್ತಿ ಎಸೆದು ಬಟ್ಟೆ ಹರಿದು ಕಲ್ಲಿನಿಂದ ಹೊಡೆದ ಭೀಕರ ದೃಶ್ಯ ಬೆಳಕಿಗೆ ಬಂದಿದೆ. ಪಕ್ಷ ಸೋತ 29 ದಿನದೊಳಗೆ ಜನರು ಅವರ ನಡೆಗೆ ರೊಚ್ಚಿಗೆದ್ದು ಚೋರ್ ಚೋರೆಂದು ಕೂಗಿ ನಡೆಸಿದ ಹಲ್ಲೆಗೆ ,ಮಮತಾ ಬ್ಯಾನರ್ಜಿ ಬಿಜೆಪಿ ಯವರ ಮೇಲೆ ಗೂಬೆಕೂರಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.