ಬೀದರ: ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸೋಲಾರ್ ನಿಯಮ ಉಲ್ಲಂಘನೆ ಆರೋಪ
ಬೀದರ: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜೇಡಿಎಸ್ ನಿಗಮ ಕಾರ್ಯಾಲಯ ಕಲಬುರ್ಗಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಬೀದರ ನಗರದಲ್ಲಿ ಸೋಲಾರ್ ಅಳವಡಿಸದ ಮನೆಗಳಿಗೆ ನಿಯಮ ಉಲ್ಲಂಘಿಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಆರೋಪಿಸಿದೆ. ಈ ಸಂಬಂಧ ಜೆಸ್ಕಾಂನ ಅಧೀಕ್ಷಕ ಮತ್ತು ಕಾರ್ಯನಿರ್ವಾಹಕ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಮಾಹಿತಿ ಹಕ್ಕು ಅಧಿನಿಯಮ 2005ರಡಿ, ಬೀದರ ನಗರದ ಡಿ-1 ರಿಂದ ಡಿ-7 ವರೆಗಿನ ಹೊಸ ಮನೆಗಳ ಸೋಲಾರ್ ಅಳವಡಿಕೆಯ ಮಾಹಿತಿ ಹಾಗೂ ಪಟ್ಟಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಲು ರೂ.21,40,600 ಶುಲ್ಕ ಪಾವತಿಸುವಂತೆ ಸೂಚಿಸುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಆರೋಪವಾಗಿದೆ. ಈ ಸಂಬಂಧ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮನವಿ ಸಲ್ಲಿಕೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಜಿಲ್ಲಾಧ್ಯಕ್ಷರು ಚರಣಜೀತ ಆಣದೂರೆ, ಮಹಾಂತೇಶ ಗೌರಕರ್, ಸುಧೀರ ಕಾಂಬಳೆ, ಧಮ್ಮವೀರ ಗೊಡಬೊಲೆ, ಅಮಿತ್ ಜಿರೋಬೆ, ಧನರಾಜ ಸಾಂಗವಿಕರ್, ಸೋಪಾನ ಸಕ್ಪಾಲ, ಚಂದ್ರಕಾಂತ ಹೆಗಡೆ ಹಾಗೂ ಮಹ್ಮದ್ ಹಾಜಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಜೆಸ್ಕಾಂನ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.