ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಯವರ ಸಮಗ್ರ ಸಾಹಿತ್ಯ ಲೋಕಾರ್ಪಣೆ
ಗಡಿನಾಡ ಚೇತನ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯ ಶೆಟ್ಟಿ ಯವರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಮತ್ತು ಬದುಕು ಬರಹ ಕುರಿತು ಮಾರ್ಚ್ 1 ಸಂಜೆ 4:30ಕ್ಕೆ ಕನ್ನಡ ಸಾಹಿತ್ಯ ಸಂಘ ಬೀದರ್ ನಲ್ಲಿ ಪ್ರೊ ಬಿ ಎಸ್ ಬಿರಾದರ್ ವಿ ವಿ ಕುಲಪತಿ ಬೀದರ್, ಡಾ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆ ಮಾಡುವರು. ಪುಣ್ಯ ಶೆಟ್ಟಿ ಜೀವನ ಸಾಧನೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.