ಬೀದರ್ ನಗರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಸಮುದಾಯ ಭವನದ ಅಡಿಗಲ್ಲು ಸಮಾರಂಭ
ಬೀದರ್ ತಾಲೂಕು ಭಾವಸಾರ್ ಕ್ಷತ್ರಿಯ ಸಮಾಜದ ವತಿಯಿಂದ ಬೀದರ ನಗರದ ಶಕ್ತಿನಗರ ಮೈಲೂರ್ ಶ್ರೀ ಹಿಂಗುಲಾಂಬಿಕಾ ಮಾತಾ ಮಂದಿರ ಸಮೀಪದ ಸ್ಥಳದಲ್ಲಿ ಸಮಾಜದ ಸಮುದಾಯ ಭವನದ ಅಡಿಗಲ್ಲು ಸಮಾರಂಭ ಭಾನುವಾರ ಜರುಗಿತು ಎಂದು ಸಮಾಜದ ಅಧ್ಯಕ್ಷ ಶ್ರೀ ಓಂ ಪ್ರಕಾಶ್ ಚೋಳ್ಕರ್ ತಿಳಿಸಿದ್ದಾರೆ. ದೀಪಕ ಅಷ್ಟಗಿಕರ್ ಇಂಜಿನಿಯರ್ ರವರ ನೇತೃತ್ವದಲ್ಲಿ ಕಟ್ಟಡದ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಇದ್ದರು.